ಹೊಸ ದಿಗಂತ ವರದಿ, ಮೈಸೂರು:
ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮೈಸೂರಿನ ಉದಯಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಜ್ಮಲ್ ಖಾನ್(40),ಸೈಯದ್ ಆಸಿಫ್(33) ಹಾಗೂ ವಾಹಿದ್ ಪಾಷಾ(31) ಬಂಧಿತರು. ಬಂಧಿತರಿoದ 30 ಸಾವಿರ ಮೌಲ್ಯದ 1 ಕೆ.ಜಿ.750 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಉದಯಗಿರಿ ಠಾಣೆಯ ನಿರೀಕ್ಷಕರಾದ ಪಿ.ಕೆ.ರಾಜು, ಎಸ್ಸೆಗಳಾದ ಸುನಿಲ್, ನಾಗರಾಜ್ ನಾಯಕ್ ಸಿಬ್ಬಂದಿಗಳಾದ ಶಂಕರ್,ಸಿದ್ದೀಖ್ ಅಹಮದ್,ಸೋಮಶೇಖರ್,ಆನಂದ್ ಕುಮಾರ್,ಸಾಜಿಯಾಬಾನು,ಮೋಹನ್ ಕುಮಾರ್,ಶಿವರಾಜಪ್ಪ,ಸಮೀರ್ ಪಟೇಲ್ ಕಾರ್ಯಾಚರಣೆ ನಡೆಸಿದರು.