ಬಳ್ಳಾರಿ ಜೆಲ್ಲೆಗೆ ಸಚಿವ ಅಂಗಾರ ಭೇಟಿ: ದರೋಜಿ ಕೆರೆ ಸಹಿತ ವಿವಿದೆಡೆ ಪರಿಶೀಲನೆ

ಹೊಸದಿಗಂತ ವರದಿ, ಬಳ್ಳಾರಿ:

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಜಿಲ್ಲೆಗೆ ಮಂಗಳವಾರ ಸಂಜೆ ಭೇಟಿ‌ ನೀಡಿದ್ದು, ಜಿಲ್ಲೆಯ ದರೋಜಿ ಕೆರೆ ಸೇರಿ ನಾನಾ ಕಡೆ ಭೇಟಿ‌ ನೀಡಿ ಪರಿಶೀಲಿಸಿದರು.
ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ, ಇಂಪ್ಯಾಕ್ಟ್ ಜೋನ್ ಅಡಿ ಕೆಎಂಆರ್ ಇಸಿ ಅನುದಾನದಡಿ ಅಳವಡಿಸಿಕೊಳ್ಳಬಹುದಾದ ಹಾಗೂ ಅನುಷ್ಟಾನಕ್ಕೆ ತರಬಹುದಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವ ಎಸ್.ಅಂಗಾರ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಕ್ಷೇತ್ರ ಪರಿವೀಕ್ಷಣೆ ನಡೆಸಿದರು.
ದರೋಜಿ ಕೆರೆ ಸೇರಿದಂತೆ ನಾನಾ ಕಡೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಚಿವರು ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!