ಡಿ.ಕೆ.ಶಿವಕುಮಾರ್ ಜೈಲು ಹಕ್ಕಿ: ಸಚಿವ ಅಶ್ವತ್ಥನಾರಾಯಣ

ಹೊಸದಿಗಂತ ವರದಿ ರಾಮನಗರ:

ಡಿ.ಕೆ.ಶಿವಕುಮಾರ್ ಹಗರಣಗಳ ಸರದಾರ ಅವನು ಜೈಲು ಹಕ್ಕಿ ಅಂತಹ ವ್ಯಕ್ತಿ ನಮ್ಮ ಬಗ್ಗೆ ಏನು ಹೇಳಲು ಸಾಧ್ಯ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಖಾರವಾಗಿ ಪ್ರತಿಕ್ರಿಯಿಸಿದರು. ರಾಮನಗರದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಈಗಾಗಲೇ ಹಲವು ಹಗರಣಗಳನ್ನು ಮಾಡಿ ತಿಹಾರ್ ಜೈಲಿನಲ್ಲಿದ್ದು ಬಂದಿರುವ ವ್ಯಕ್ತಿ ಹಗರಣಗಳ ಬಗ್ಗೆ ಮಾತನಾಡುತ್ತಾರೆ ಅದು ಬಿಟ್ಟು ಅವರ ಬಾಯಲ್ಲಿ ಭಗವದ್ಗೀತೆ ಕೇಳಲು ಸಾಧ್ಯವೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ರಾಮನಗರ ಜಿಲ್ಲೆಯಲ್ಲಿ ತನ್ನದೇ ಅಧಿಪತ್ಯ ಎಂದು ಮೆರೆಯುತ್ತಿರುವ ವ್ಯಕ್ತಿಗೆ ಈ ಬಾರಿ ಮುಖಭಂಗವಾಗಲಿದೆ. ಹಣ ಮಾಡುವುದೇ ಕಾಯಕ ಮಾಡಿಕೊಂಡಿರುವ ವ್ಯಕ್ತಿ ಅವರು. ಬೇರೆಯವರು ಕೂಡ ಹಣವನ್ನು ಮಾಡುತ್ತಿದ್ದಾರೆ ಎಂಬ ಅನುಮಾನ ಆದ್ದರಿಂದ ಅವರು ಹಗರಣಗಳ ಬಗ್ಗೆ ಮಾತನಾಡುತ್ತಾರೆ ತಾನು ಕಳ್ಳ ಪರರ ನಂಬ ಎಂಬ ಗಾದೆಯಂತೆ ವತಿ೯ಸುತ್ತಾರೆ ಎಂದರು. ಕಳ್ಳರ ಕಳ್ಳ ಬಬ್ಬ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿದ್ದಾನೆ. ಕಾಂಗ್ರೆಸ್ ಪಕ್ಷಕ್ಕೆ ಎಂತಹ ದುಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!