ಹೊಸದಿಗಂತ ವರದಿ,ಬೀದರ್:
ಉತ್ತರ ಪ್ರದೇಶದಲ್ಲಿ ಮೃತಪಟ್ಟ ಬೀದರನ ಎಂಟು ಜನರಿಗೆ ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಸರ್ಕಾರದಿಂದ ಬೇಗನೆ ಪರಿಹಾರ ಸಿಗುವಂತೆ ಮಾಡುತ್ತೆವೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಬಿ, ಚವ್ಹಾಣ ಹೇಳಿದರು.
ಅವರು ಗುರುವಾರ ಉತ್ತರ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ಮೃತಪಟ್ಟ ಬೀದರನ ಎಂಟು ಜನ ಸಂತ್ರಸ್ಥರ ಮನೆಗೆ ಭೇಟಿ ನೀಡಿ ಅವರಿಗೆ ಸಾಂತ್ವಾನ ಹೇಳಿ ಮಾತನಾಡಿದರು.
ತಾವು ಯಾವುದೇ ಕಾರಣಕ್ಕೆ ಎದೆ ಗುಂದದಿರಿ ತಮ್ಮೊಂದಿಗೆ ನಾವಿದ್ದೇವೆ ಮತ್ತು ಇನ್ನುಳಿದ ಗಾಯಾಳುಗಳ ವೆಚ್ಚವನ್ನು ನಮ್ಮ ಸರ್ಕಾರವೆ ಭರಿಸುತ್ತದೆ ಈ ದುರ್ಘಟನೆ ಆಗಬಾರದು ಆಗಿದೆ ಇದು ಬಹಳ ದು:ಖದ ಸಂಗತಿ ಭಗವಂತ ಈ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿ ನೀಡಲಿ ನಾನು ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮುಲಕ ಮಾತನಾಡಿದ್ದೆನೆ. ಈ ರಸ್ತೆ ಅಫಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬರಿ ಸರ್ಕಾರದಿಂದ 5 ಲಕ್ಷ ಪರಿಹಾರವನದ್ನು ಶೀಘ್ರದಲ್ಲಿಯೆ ಸಿಗುವಂತೆ ಮಾಡಲಾಗುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.