ಮಾವು ಮೇಳಕ್ಕೆ ಸಚಿವ ಶಿವರಾಮ ಹೆಬ್ಬಾರ್ ಚಾಲನೆ

ಹೊಸದಿಗಂತ ವರದಿ ಅಂಕೋಲಾ:

ಅಂಕೋಲಾ ಬೆಳೆಗಾರರ ಸಮಿತಿ ಆಶ್ರಯದಲ್ಲಿ ದಲ್ಲಾಳಿ ಮುಕ್ತ ಮಾರುಕಟ್ಟೆ ಒದಗಿಸುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ಮಾವು ಮೇಳಕ್ಕೆ ಶನಿವಾರ ಭರ್ಜರಿ ಆರಂಭವಾಯಿತು. ಅಂಕೋಲೆಯ ಪ್ರಸಿದ್ಧ ಕರಿ ಈಶಾಡು ಹಣ್ಣಿನ ಜೊತೆಗೆ ಆಪೂಸ್, ಚಾಲ್ತಿ, ನೀಲಂ, ರತ್ನಾಗಿರಿ ಆಪೂಸ್, ತೋತಾಪುರಿ ಸೇರಿದಂತೆ ವಿವಿಧ ಜಾತಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿವೆ.

ಮಾವಿನ ಉಪ ಉತ್ಪನ್ನಗಳಾದ ಮಾವಿನ ಉಪ್ಪಿನ ಕಾಯಿ, ಹಪ್ಪಳ ಮತ್ತಿತರ ಉತ್ಪನ್ನಗಳು ಮಾರಾಟವಾಗುತ್ತಿವೆ. ಬೆಳೆಗಾರರ  ಸಮಿತಿ ಅಧ್ಯಕ್ಷ ನಾಗರಾಜ ನಾಯಕ ನೇತೃತ್ವದಲ್ಲಿ ಈ ಮೇಳ ಆಯೋಜನೆಯಾಗಿದೆ. ಸಚಿವ ಶಿವರಾಮ ಹೆಬ್ಬಾರ್ ಈ ಅಪರೂಪದ ಮಾವು ಮೇಳಕ್ಕೆ ಚಾಲನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!