ಮನೆ ಮನೆಗೆ ತೆರಳಿ ಹಕ್ಕುಪತ್ರ ವಿತರಿಸಿದ ಸಚಿವ ಶ್ರೀರಾಮುಲು

ದಿಗಂತ ವರದಿ ಬಳ್ಳಾರಿ:

ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು, ನಗರದ ರಾಣಿತೋಟ ವಾರ್ಡ್ 10ರಲ್ಲಿ ಬುಧವಾರ ಬೆಳ್ಳಂ ಬೆಳಿಗ್ಗೆ ಮನೆ ಮನೆಗೆ ತೆರಳಿ ಬಡ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಿದರು.

ನಿಮ್ಮೊಂದಿಗೆ ನಾವು, ನಿಮ್ಮ ಮನೆ, ನಿಮ್ಮ‌ಹಕ್ಕು ಎನ್ನುವ ಎನ್ನುವ ಘೋಷ ವಾಕ್ಯದಡಿ ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ವಾರ್ಡ್ ಸದಸ್ಯ ಕೋನಂಕಿ ತಿಲಕ್ ಕುಮಾರ್ ಅವರು ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ರಾಣಿತೊಟ ಪ್ರದೇಶದಲ್ಲಿ ಬಡ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. ರಾಣಿ ತೋಟ ಪ್ರದೇಶದ ವೀರೇಶ್, ಮುಖಂಡರಾದ ಶ್ರೀನಿವಾಸ್ ಮಧು, ಪ್ರಶಾಂತ್, ರಘು, ಕುಮಾರ್, ರಾಣಿತೋಟದ ನಾಯಕರು, ಮರಿಸ್ವಾಮಿ ಮಠದ ನಾಯಕರು,‌ ಪ್ರಮುಖರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!