ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಶಾಲಾ ಬಾಲಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ರಕ್ಷಣಾ ಸಿಬ್ಬಂದಿಯನ್ನು ಬುಧವಾರ ಬಂಧಿಸಲಾಗಿದೆ.
ಛಾಪ್ರಾ ಜನರಲ್ ರೈಲ್ವೇ ಪೊಲೀಸರು, ದಿಬ್ರುಗಢ್ನಲ್ಲಿ ನಿಯೋಜಿಸಲಾದ ಜಮ್ಮು ಮೂಲದ ಅಮರಜೀತ್ ಸಿಂಗ್ ಮತ್ತು ಅರುಣಾಚಲ ಪ್ರದೇಶದ ಐಟಿಬಿಪಿಯಲ್ಲಿ ನಿಯೋಜಿಸಲಾದ ಪಂಜಾಬ್ ಮೂಲದ ಮುಖೇಶ್ ಕುಮಾರ್ ಸಿಂಗ್ ಅನ್ನು ಬಂಧಿಸಿದ್ದಾರೆ.
ಸಿಕ್ಕಿಂನಿಂದ ದೆಹಲಿಗೆ ಶಾಲಾ ಪ್ರವಾಸಕ್ಕೆ ಬಂದಿದ್ದ ನವೋದಯ ವಿದ್ಯಾಲಯದ ಬಾಲಕಿಯರು ಹೊಸ ಜಲ್ಪೈಗುರಿ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ್ದು, ದಿಬ್ರುಗಢ-ದೆಹಲಿ ಮಾರ್ಗದಲ್ಲಿ ಅನುಚಿತವಾಗಿ ವರ್ತಿಸಲಾಗಿದೆ.
ಶಾಲೆಯ ಪ್ರಾಂಶುಪಾಲ ವಿನಯ್ ಕುಮಾರ್ ತಮ್ಮ ದೂರಿನಲ್ಲಿ ಆರೋಪಿಗಳು ಕುಡಿದ ಮತ್ತಿನಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.