ಹೊಸದಿಗಂತ ಆನ್ ಲೈನ್ ಡೆಸ್ಕ್:
ವಿಧಾನ ಪರಿಷತ್ನ ಸದನದಲ್ಲಿ ಇನ್ಮುಂದೆ ಸದ್ಯಸರು ಮೊಬೈಲ್ ಬಳಕೆ ಮಾಡದಂತೆ ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಆದೇಶ ಹೊರಡಿಸಿದ್ದಾರೆ.
ಗುರುವಾರದಿಂದ ಬಜೆಟ್ ಅಧೀವೇಶನ ಶುರುವಾಗಲಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಸದ್ಯಸರು ಮೊಬೈಲ್ ತರದಂತೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಸಭಾನಾಯಕರು, ಸಚೇತಕರು ಹಾಗು ಸದ್ಯಸರ ಜೊತೆಗೆ ಚರ್ಚೆ ನಡೆಸಿ ಸದನ ಘನತೆಗೆ ಕಪ್ಪು ಚುಕ್ಕೆ ಬಾರದ ಹಾಗೇ ನಡೆದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಅಂತ ಹೇಳಿದ್ದಾರೆ.