ಮೊದಲು ಮೋದಿಯನ್ನು ಮುಗಿಸಬೇಕು: ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಮೊದಲು ಮೋದಿಯನ್ನು ಮುಗಿಸಬೇಕು. ನಂತರ ಬಿಜೆಪಿಯನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಸುಖ್‌ಜಿಂದರ್ ಸಿಂಗ್ ರಾಂಧವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಎಸ್‌ಎಸ್ ರಾಂಧವ, ಮೋದಿಯನ್ನು ಮುಗಿಸಬೇಕು. ಮೋದಿ ಇದ್ದರೆ ಭಾರತ ನಾಶವಾಗಲಿದೆ ಎಂದಿದ್ದಾರೆ.

ಅದಾನಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಜಂಟಿ ಸಂಸದೀಯ ಸಮಿತಿ ತನಿಖೆಗೆ ಮುಂದಾಗುತ್ತಿಲ್ಲ. ಉದ್ಯಮಿಗಳಿಗೆ ಭಾರತವನ್ನು ಕೊಟ್ಟು ಬಿಜೆಪಿ ದೇಶವನ್ನೇ ಬರ್ಬಾದ್ ಮಾಡುತ್ತಿದೆ. ಅದಾನಿ ಬಗ್ಗೆ ಮಾತನಾಡುವುದು ಬಿಡಿ. ಮೋದಿ ಮುಗಿಸುವ ಕುರಿತು ಮಾತನಾಡಿ. ಮೋದಿ ಮುಗಿಸಿದರೆ ಭಾರತ ಉದ್ಯಮಿಗಳ ಕೈಯಿಂದ ಬಚಾವ್ ಆಗಲಿದೆ. ಆದರೆ ಮೋದಿ ಇದ್ದರೆ ಹಿಂದುಸ್ಥಾನ ನಿರ್ನಾಮವಾಗಲಿದೆ ಎಂದಿದ್ದಾರೆ.

2019ರ ಪುಲ್ವಾಮಾ ದಾಳಿಯ ತನಿಖೆ ಸರಿಯಾಗಿಲ್ಲ. ನಮ್ಮ ಯೋಧರು ಹೇಗೆ ಹುತಾತ್ಮರಾದರು ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಇದು ಕೆಲವ ಉದಾಹರಣೆ ಅಷ್ಟೇ. ಬಿಜೆಪಿಯ ಹೆಜ್ಜೆ ಹೆಜ್ಜೆಯಲ್ಲಿ ಭಾರತವನ್ನು ಸರ್ವನಾಶ ಮಾಡುತ್ತಿದೆ ಎಂದು ರಾಂಧವ ಆರೋಪಿಸಿದ್ದಾರೆ.
ರಾಂಧವ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!