ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಾಣಸಿ ಎಂದೂ ಕರೆಯಲ್ಪಡುವ ಕಾಶಿ ಭಾರತದಷ್ಟೇ ಏಕೆ, ಜಗತ್ತಿನ ಪುರಾತನ ನಗರಗಳಲ್ಲೊಂದು ಎನಿಸಿಕೊಂಡಿದೆ. 2014ರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ವಾರಾಣಸಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನರೇಂದ್ರ ಮೋದಿ ಪುರಾತನ ಪ್ರಜ್ಞೆಯಲ್ಲೇ ಹೊಸ ವೈಭವ ಕಟ್ಟುವ ಸಂದೇಶ ಧ್ವನಿಸಿದ್ದರು. ಅದಾಗಿ ಎಂಟು ವರ್ಷಗಳ ನಂತರ ಅದು ಕೇವಲ ಸಂಕೇತವಾಗಿ ಉಳಿಯದೇ ಸಾಕಾರವಾಗಿದೆ. ಕಾಶಿ ವಿಶ್ವನಾಥನ ಅಂಗಳಕ್ಕೆ ವಿಶಾಲತೆ ಮತ್ತು ವೈಭವ ಬಂದಿದೆ. ಗಂಗೆ ಶುದ್ಧವಾಗಿದೆ. ಸಿಯೋಲ್ ಶಾಂತಿ ಪ್ರಶಸ್ತಿಯ ಮೊತ್ತವಾಗಿ ಬಂದ ರು.1.2 ಕೋಟಿ ರುಪಾಯಿಗಳನ್ನು ನಮಾಮಿ ಗಂಗೆ ಯೋಜನೆಗೆ ನೀಡಿದವರು ಮೋದಿ.
(ವಿಶ್ವನಾಥ ಮಂದಿರದಲ್ಲಿ ಮೋದಿ)