ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, 24 ಹಿಂದೂ ಯುವಕರ ಕೊಲೆಗಳಾಗಿದ್ದವು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು , ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲೇ ರಾಜ್ಯದಲ್ಲಿ ಕೋಮುಗಲಭೆಗಳು ಜಾಸ್ತಿಯಾಗಿತ್ತು ಎಂದರು.
ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಅನ್ನುವ ಹಾಗೆ ಕಾಂಗ್ರೆಸ್ ಪಕ್ಷದ ತುಷ್ಟೀಕರಣದ ಧೋರಣೆ ಮತೀಯ ಗಲಭೆಗಳಿಗೆ ಪ್ರಚೋದನೆ ನೀಡುತಿತ್ತು ಎಂದು ಕಟೀಲ್ ಹೇಳಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, 24 ಹಿಂದೂ ಯುವಕರ ಕೊಲೆಗಳಾಗಿದ್ದವು , ಅಲ್ಲದೆ ಅವರ ಅವಧಿಯಲ್ಲೇ ಜೈಲಿನಲ್ಲಿರಬೇಕಿದ್ದ 2,000 ಜನ ಹೊರಬಂದಿದ್ದಾರೆ ಎಂದು ನಳಿನ್ ಹೇಳಿದರು.