ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಮಲಾಕ್ಷಿ ವಿವಿದ್ದೋಶ ಸೊಸೈಟಿ ಹೆಸರಲ್ಲಿ ಬಹುಕೋಟಿ ವಂಚನೆ ಪ್ರಕರಣವನ್ನು ಎದುರಿಸುತ್ತಿದ್ದ ಬಿ.ವಿ ಲಕ್ಷ್ಮೀನಾರಾಯಣನಿಗೆ ಸೋಮವಾರ ಜಿಲ್ಲಾ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿ ಆದೇಶಿಸಿದೆ.
ಡಿ.28 2022 ರಂದು ಆರೋಪಿ ಲಕ್ಷ್ಮೀನಾರಾಯಣನನ್ನು ಬ್ರಹ್ಮಾವರದ ಮಟಪಾಡಿ ಬಳಿ ಬಂಧಿಸಲಾಗಿದೆ ಎಂದು ಉಡುಪಿ ಸೆನ್ ಠಾಣಾ ಪೋಲಿಸರು ತಿಳಿಸಿದ್ದರು. ನಂತರ ಡಿ. 29 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಅಂದು ನ್ಯಾಯಾಲಯ 14 ದಿನಗಳ ನ್ಯಾಯಾಲಯ ಬಂಧನ ವಿಧಿಸಿ ಆದೇಶಿಸಿತ್ತು. ಜ. 2 ರಂದು ಸೆನ್ ಠಾಣಾ ಪೋಲಿಸರು ಲಕ್ಷ್ಮೀನಾರಾಯಣನನ್ನು ಹೆಚ್ಚಿನ ತನಿಖೆಗೆ ನ್ಯಾಯಾಲಯದ ಮುಖಾಂತರ ಐದು ದಿನಗಳ ಅವಧಿಗೆ ಪೋಲಿಸ್ ಕಸ್ಟಡಿಗೆ ಪಡೆದಿದ್ದರು.