ಜಮೀನಿನ ದಾರಿ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಹೊಸದಿಗಂತ ವರದಿ ವಿಜಯಪುರ: 

ಜಮೀನಿನ ದಾರಿ ವಿವಾದ ಹಿನ್ನೆಲೆ ರೈತನೊಬ್ಬ ತನ್ನ ಸಹೋದರ ಸಂಬಂಧಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದಲ್ಲಿ ನಡೆದಿದೆ. ಅಶೋಕ ಕುಂಬಾರ ಕೊಲೆಯಾದ ವ್ಯಕ್ತಿ.  ಅಶೋಕ ಕುಂಬಾರ ಹಾಗೂ ತನ್ನ ಸಂಬಂಧಿ ಮಧ್ಯೆ, ಜಮೀನು ದಾರಿ ವಿಚಾರಕ್ಕೆ ಗಲಾಟೆ ಆಗಿತ್ತು. ಈ ಹಿನ್ನೆಲೆ ಅಶೋಕ ಕುಂಬಾರನನ್ನು ಆತನ ಸಹೋದರ ಸಂಬಂಧಿ ಮಹಾದೇವಪ್ಪ ಕುಂಬಾರ ಹತ್ಯೆ ಮಾಡಿದ್ದಾನೆ ಎಂದು ಮೃತಪಟ್ಟಿರುವ ಅಶೋಕ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ಸಂಬಂಧ ಬಸವನಬಾಗೇವಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!