ಹೊಸದಿಗಂತ ವರದಿ, ಶಿವಮೊಗ್ಗ:
ಹಿಂದೂ ಸಮಾಜಕ್ಕೂ ಒಂದು ತಾಳ್ಮೆ ಇದೆ. ಅದನ್ನು ಪದೇಪದೇ ಪರೀಕ್ಷಿಸುವ ಕೃತ್ಯ ಕೆಲ ಮುಸಲ್ಮಾನ್ ಗೂಂಡಾಗಳಿಂದ ನಡೆಯುತ್ತಿದ್ದು, ಅಂತಹವರಿಗೆ ಮುಸಲ್ಮಾನ್ ನಾಯಕರು ಬುದ್ದಿ ಹೇಳಬೇಕೆಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಎರಡು ದಿನಗಳ ಹಿಂದೆ ಮುಸ್ಲಿಂ ಯುವಕರಿಂದ ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವೆಂಕಟೇಶ್ ಅವರ ಆರೋಗ್ಯವನ್ನು ಶನಿವಾರ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಯುವಕರಿಗೆ ಆಕ್ರೋಶ ಬರುವ ರೀತಿಯಲ್ಲಿ ಮುಸಲ್ಮಾನ್ ಕೆಲ ಗೂಂಡಾ ಯುವಕರು ನಡೆದುಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಆರೋಗ್ಯಕರ ಬೆಳವಣಿಕೆಯಲ್ಲ ಎಂದರು.
ಹಿಂದು ಹರ್ಷನ ಕೊಲೆಯಾದ ಬಳಿಕ ನಡೆದ ಅಹಿಕರ ಘಟನೆಯ ನಂತರವೂ ಮುಸಲ್ಮಾನ್ ಕೆಲ ಗೂಂಡಾಗಳ ಆಕ್ರೋಶ ಕಡಿಮೆಯಾಗಿಲ್ಲ. ಹೀಗಾಗಿಯೇ ನಮ್ಮ ಕಾರ್ಯಕರ್ತ ಪ್ರಕಾಶ್ ಸೋದರನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಬಳಿಕ ಸತ್ತು ಹೋದ ಓಡ್ರೋ ಎಂದು ಜಾಗ ಖಾಲಿಮಾಡಿದ್ದಾರೆ. ಇದು ಅವರ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದರು.