ನನ್ನ ಹೆಂಡತಿಗೆ ಮೊಟ್ಟೆ ಬೇಯಿಸೋಕೆ ಬರಲ್ಲ: ಫೋಟೋ ಹಂಚಿಕೊಂಡ ರವೀಂದ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳಿನ ರವೀಂದ್ರ ಚಂದ್ರಶೇಖರ್ ಮತ್ತು ಮಹಾಲಕ್ಷ್ಮಿ ಜೋಡಿ ಎಲ್ಲರಿಗೂ ಚಿರಪರಿಚಿತ. ಸದಾ ನಾನಾ ವಿಚಾರದಲ್ಲಿ ಸುದ್ದಿಯಲ್ಲಿರುವ ಈ ಜೋಡಿ ಇದೀಗ ಮೊಟ್ಟೆ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ.

ಮನೆಯಲ್ಲೇ ಮೊಟ್ಟೆ ಬೇಯಿಸಲು ಹೋಗಿ ಹೆಂಡತಿ ಏನು ಮಾಡಿದ್ದಾಳೆ ಎನ್ನುವುದನ್ನು ಸೋಷಿಯಲ್ ಮೀಡಿಯಾ ಮೂಲಕ ವೀಂದ್ರ ಚಂದ್ರಶೇಖರ್ ಹಂಚಿಕೊಂಡಿದ್ದಾರೆ. ಸೀದು ಹೋದೆ ಮೊಟ್ಟೆಯ ಫೋಟೋವನ್ನೂ ಅವರು ಅಪ್ ಲೋಡ್ ಮಾಡಿದ್ದಾರೆ.

ಮಹಾಲಕ್ಷ್ಮಿಯನ್ನು ಮದುವೆಯಾದ ನಂತರ ಶೂಟಿಂಗ್ ಸ್ಥಳಕ್ಕೆ ಮನೆಯಿಂದಲೇ ಊಟ ತಗೆದುಕೊಂಡು ರವೀಂದ್ರ ಹೋಗಿದ್ದರು. ಹಾಗಾಗಿಯೇ ಹೆಂಡತಿಗೆ ಮೊಟ್ಟೆ ಬೇಯಿಸಲು ರವೀಂದ್ರ ಹೇಳಿದ್ದರಂತೆ. ಆದರೆ, ಮಹಾಲಕ್ಷ್ಮಿಗೆ ಮೊಟ್ಟೆಯನ್ನೂ ಸರಿಯಾಗಿ ಬೇಯಿಸಲು ಬರುವುದಿಲ್ಲ ಎನ್ನುತ್ತಾರೆ .

ಎರಡು ಮೊಟ್ಟೆಗಳನ್ನು ಬೇಯಿಸಲು ಇಟ್ಟಿದ್ದ ಮಹಾಲಕ್ಷ್ಮಿ, ಅದನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಕಾರಣಕ್ಕಾಗಿ ಮೊಟ್ಟೆಗಳು ಸೀದು ಹೋಗಿವೆ. ಅವುಗಳನ್ನು ಫೋಟೋ ತಗೆದಿರುವ ರವೀಂದ್ರ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮೊಟ್ಟೆ ಸೀದು ಹೋಗಿದ್ದನ್ನು ನಾನು ಜೀವಮಾನದಲ್ಲೇ ನೋಡಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ನ್ಯೂ ಲೈಫ್ ಮೈ ವೈಫ್ ಎಂದು ಕ್ಯಾಪ್ಶನ್ ಬೇರೆ ಪತ್ನಿಯ ಕುಕ್ಕಿಂಗ್ ಸ್ಕಿಲ್ಸ್ ಬಗ್ಗೆ ತಮಾಷೆಯಾಗಿಯೇ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!