ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸೇನೆಯ ಹೊಸ ಯೋಜನೆ ಅಗ್ನಿಪಥದ ವಿರುದ್ಧ ದೇಶದ ಕೆಲವೆಡೆ, ವಿಶೇಷವಾಗಿ ಬಿಹಾರದಲ್ಲಿ ಕೆಲವು ಯುವಕರ ಗುಂಪುಗಳಿಂದ ಕಲ್ಲುತೂರಾಟ, ರೈಲಿಗೆ ಬೆಂಕಿಯಂಥ ಘಟನೆಗಳು ಗುರುವಾರ ವರದಿಯಾಗಿವೆ.
ಅಗ್ನಿಪಥ ಯೋಜನೆ ಯುವಕರನ್ನು ಕೇವಲ ನಾಲ್ಕು ವರ್ಷ ಬಳಸಿಕೊಂಡು ನಂತರ ಕೈಬಿಡುತ್ತದೆ ಎಂಬ ಅಪಪ್ರಚಾರ ಇದರ ಹಿಂದೆ ಕೆಲಸ ಮಾಡಿರುವಂತೆ ತೋರುತ್ತದೆ. ಈ ಕಲ್ಲು ತೂರಾಟಗಾರರು, ದಂಗೆಕೋರರು ನಿಜಕ್ಕೂ ಸೇನೆಯನ್ನು ಸೇರುವುದರಲ್ಲಿ ಉತ್ಸುಕರೇ ಅಥವಾ ವಿಧ್ವಂಸಕ್ಕೆ ಕಾರಣವೊಂದನ್ನು ಹುಡುಕುತ್ತಿದ್ದಾರೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.
ಅದೇನೇ ಇದ್ದರೂ ಈ ಒಟ್ಟಾರೆ ಯೋಜನೆ ಸಂಬಂಧದ ಸತ್ಯ-ಮಿಥ್ಯಗಳು ಹೀಗಿವೆ.