ನಯನತಾರಾ ದಂಪತಿಯ ಮಹಾತ್ಕಾರ್ಯ: ಒಂದು ಲಕ್ಷ ಮಂದಿಗೆ ಔತಣಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್‌ ಅವರ ಮದುವೆ ದಿನ ಎಂದೂ ಮರೆಯಲಾಗದಂತಹ ಕೆಲಸ ಮಾಡಿದ್ದಾರೆ. ಜೂನ್ 9 ರಂದು ಕುಟುಂಬ ಸದಸ್ಯರು, ಆಪ್ತರು ಮತ್ತು ಸೆಲೆಬ್ರಿಟಿಗಳ ಹಾರೈಕೆ ನಡುವೆ ನಡೆದ ಅದ್ದೂರಿ ಮದುವೆ ಮಾತ್ರವಲ್ಲದೆ ಅದೆಷ್ಟೋ ಜನಕ್ಕೆ ಮಾದರಿಯಾಗಿ ನಿಂತಿದೆ.

ದಾನದಲ್ಲಿ ಅನ್ನದಾನ ಶ್ರೇಷ್ಠ ಎಂಬ ಮಾತನ್ನು ಅನುಸರಿಸಿ ತಮಿಳುನಾಡಿನ ವಿವಿಧ ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಸುಮಾರು ಒಂದು ಲಕ್ಷ ಅನಾಥರು, ವೃದ್ಧರು, ಬಡವರಿಗೆ ಮದುವೆಯ ದಿನದಂದು ನಯನ-ವಿಘ್ನೇಶ್ ಔತಣ ಕೂಟ ಏರ್ಪಡಿಸಿದ್ದರು. ನಯನತಾರಾ ಅಭಿಮಾನಿಗಳ ಆಶ್ರಯದಲ್ಲಿ ತಮಿಳುನಾಡಿನಾದ್ಯಂತ ಈ ಕಾರ್ಯಕ್ರಮ ನಡೆಯಿತು. ಇದಕ್ಕೆ ಬೇಕಾದ ಎಲ್ಲ ಹಣವನ್ನು ವಿಗ್ನೇಶ್‌ ದಂಪತಿ ನೀಡಿದ್ದಾರೆ. ಮದುವೆಯ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿದ ದಂಪತಿ ನೂರು ಕಾಲ ಸುಖವಾಗಿರಲೆಂದು ಜನ ಆಶೀರ್ವಾದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!