ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಸೇನೆಗೆ ಸಿಗಲಿರುವ ಹೊಸ ಚಿಹ್ನೆಯು ಪಕ್ಷಕ್ಕಾಗಿ ಕ್ರಾಂತಿಯನ್ನೇ ಮಾಡಲಿದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.
ಸದ್ಯ ಜೈಲಿನಲ್ಲಿರುವ ರಾವುತ್ ಅವರ ಜಾಮೀನು ಅರ್ಜಿಗಾಗಿ ಮುಂಬೈ ಸತ್ರ ನ್ಯಾಯಾಲಯದಲ್ಲಿ ಇಂದು ಬಂದ ಕ್ಷಣ ನ್ಯಾಯಾಲಯ ಆವರಣದಲ್ಲಿ ಶಿವಸೇನಾ ಕಾರ್ಯಕರ್ತನೊಬ್ಬನ ಪ್ರಶ್ನೆಗೆ ಉತ್ತರಿಸುತ್ತ ಮಾತನಾಡಿದರು.
ಚಿಹ್ನೆ ಬದಲಾಗಿರುವುದು ಇದೇ ಮೊದಲೇನಲ್ಲ. ಕಾಂಗ್ರೆಸ್ನಲ್ಲಿ ಇಂದಿರಾಗಾಂಧಿ ಕೂಡ ಇದೇ ಪರಿಸ್ಥಿತಿ ಎದುರಿಸಿದ್ದರು, ಅವರ ಚಿಹ್ನೆ ಕೂಡ 3 ಬಾರಿ ಬದಲಾಗಿತ್ತು. ಜನಸಂಘವೂ ಈ ಪರಿಸ್ಥಿತಿಯನ್ನು ಎದುರಿಸಿತ್ತು. ಹಾಗಾಗಿ ಇದು ಹೊಸದೇನಲ್ಲ. ಬಹುಶಃ ಈ ಹೊಸ ಚಿಹ್ನೆಯು ಶಿವಸೇನೆಗೆ ಕ್ರಾಂತಿಯನ್ನು ಸೃಷ್ಟಿಸಲಿದೆ. ಎಲ್ಲರಿಗೂ ಗೊತ್ತು ನಿಜವಾದ ಶಿವಸೇನೆ ಯಾರು ಎಂಬುದು ಎಂದು ರಾವುತ್ ಹೇಳಿದರು.
ಅಂಧೇರಿ ಚುನಾವಣೆಗೂ ಮುನ್ನ ಶಿಂಧೆ ಗುಂಪಿಗೆ ಬಿಲ್ಲುಬಾಣದ ಚಿಹ್ನೆ ಅಷ್ಟು ಸುಲಭವಾಗಿ ಸಿಗಲಾರದು. ಸದ್ಯ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಆಕ್ರೋಶದ ವಾತಾವರಣವಿದೆ ಎಂದು ರಾವುತ್ ಹೇಳಿದ್ದಾರೆ.