ಹೊಸದಿಗಂತ ವರದಿ,ಮೈಸೂರು:
ರೈಲಿಗೆ ತಲೆ ಕೊಟ್ಟು ನವ ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೊರವಲಯದಲ್ಲಿ ನಡೆದಿದೆ.
ಶ್ರೀರಂಗಪಟ್ಟಣದ ನಿವಾಸಿ ಸ್ವಾತಿ(19) ಮೃತ ದುರ್ದೆÊವಿ. ಕಳೆದ 10 ತಿಂಗಳ ಹಿಂದೆ ಮೈಸೂರಿನ ಕುಂಬಾರಕೊಪ್ಪಲಿನ ನಿವಾಸಿ ಸಾಗರ್ ಎಂಬಾತನನ್ನ ವಿವಾಹವಾಗಿದ್ದ ಈಕೆ, ಹಾಲು ತರುವುದಾಗಿ ಕುಂಬಾರಕೊಪ್ಪಲಿನಿAದ ಹೊರಟ ಮನೆಗೆ ಹಿಂದಿರುಗಿಲ್ಲ. ವಿಕ್ರಾಂತ್ ಕಾರ್ಖಾನೆ ಬಳಿ ಇರುವ ಪ್ರೀತಿ ಗ್ರಾನೈಟ್ ಬಳಿ ರೈಲ್ವೆ ಹಳಿ ಸಮೀಪ ತಲೆ ಚಿದ್ರವಾಗಿರುವ ಸ್ವಾತಿ ದೇಹ ಪತ್ತೆಯಾಗಿದೆ.
ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.