ಮಣ್ಣಲ್ಲಿ ಮಣ್ಣಾದ್ರೂ ಮತ್ತೆ ನಿಮ್ಮ ಜತೆ ಬರಲ್ಲ- ನಿತೀಶ್ ಹಳೇ ಹೇಳಿಕೆ ವೈರಲ್ ಆಯ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್

ಈ ಹಿಂದೆ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನದಿಂದ ಹೊರಬಂದು ಬಿಜೆಪಿ ಸೇರಿ ಮುಖ್ಯಮಂತ್ರಿಯಾದವರು ನಿತೀಶ್ ಕುಮಾರ್. ಘಟಬಂಧನಕ್ಕೂ ಪೂರ್ವದಲ್ಲಿ ಅವರು ಬಿಜೆಪಿ ಜತೆಗಿದ್ದರು.

ಈ ಹಿಂದೆ ಮಹಾಘಟಬಂಧನದ ಸಖ್ಯ ತೊರೆಯುವಾಗ ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಹೇಳಿದ್ದ ಮಾತು- “ನಾವು ಮಣ್ಣು ಸೇರುವ ಸಮಯ ಬಂದರೂ ಮತ್ತೆ ಈ ಕೂಟಕ್ಕೆ (ಆರ್ಜೆಡಿ-ಕಾಂಗ್ರೆಸ್) ಮರಳಿಬರುವುದಿಲ್ಲ. ಇದೇನಿದ್ದರೂ ಮುಗಿದ ಅಧ್ಯಾಯ” ಎಂದಿದ್ದರು.

ಇದೀಗ ಅವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಮತ್ತೆ ಕಾಂಗ್ರೆಸ್-ಆರ್ಜೆಡಿ ಬಳಗ ಸೇರುವ ಸಾಧ್ಯತೆ ತೋರಿಸಿರುವ ಹೊತ್ತಿನಲ್ಲಿ ಅವರ ಹಳೆಮಾತುಗಳು ಟ್ವಿಟ್ಟರಿನಲ್ಲಿ ವೈರಲ್ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!