ಯಾವ ಹೊಂದಾಣಿಕೆಯೂ ಇಲ್ಲ, ಸ್ವಂತಬಲದಿಂದ ಗೆಲ್ಲುತ್ತೇನೆ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರುಣ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದು, ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ ಖಡಕ್ ಉತ್ತರ ನೀಡಿದ್ದಾರೆ.

ನಾನು ಸ್ಪರ್ಧಿಸುತ್ತಿರೋ ಶಿಗ್ಗಾಂವಿ ಕ್ಷೇತ್ರದಲ್ಲಿ ಯಾರು ಯಾರ ಜೊತೆಯಾದರೂ ಹೊಂದಾಣಿಕೆ ಮಾಡಿಕೊಳ್ಳಿ, ನನಗೆ ಭಯ ಇಲ್ಲ, ಸ್ವಂತ ಬಲದಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ್ದಾರೆ.

ಯಾರ ಯಾರ ಜೊತೆಗಾದ್ರೂ ಸೇರಲಿ, ಸಿದ್ದರಾಮಯ್ಯಗೆ ಸ್ವಂತ ಬಲ ಇದ್ದರೆ ಅವರ ಗೆಲುವು ತಡೆಯೋಕೆ ಆಗೋದಿಲ್ಲ, ಸ್ವಂತ ಬಲ ಇಲ್ಲದೆ ಹೋದರೆ ಸೋಲುತ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಭಯದಲ್ಲಿ ಒಳ ಮೈತ್ರಿ, ಹೊರ ಮೈತ್ರಿ ಎಂದೇನೇನೋ ಮಾತನಾಡುತ್ತಿದ್ದಾರೆ. ಎಲ್ಲ ಅಭ್ಯರ್ಥಿಗಳು ತಾವೇ ಗೆಲ್ಲಬೇಕು ಎಂದು ನಿಲ್ಲುತ್ತಾರೆ, ಬಿಟ್ಟುಕೊಡೋದಕ್ಕೆ ಅಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!