ಹೊಸದಿಗಂತ ವರದಿ ಕೊಪ್ಪಳ:
ನನ್ನ ಹಾಗೂ ಯಡಿಯೂರಪ್ಪ ಮಧ್ಯೆ ತಂದೆ ಮಗ ನಡುವಿನ ಸಂಬಂಧವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕೊಪ್ಪಳ ನಗರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಎಂದು ಹೇಳೋದು ಹಗಲುಗನಸು.
ಅವರು ನಮ್ಮ ಪರಮೋಚ್ಛ ನಾಯಕರು. ಬಿಎಸ್ವೈ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲಾಗುವುದು ಎಂದರು. ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬ ಪ್ರಿಯಾಂಕ ಖರ್ಗೆ ಹೇಳಿಕೆ ಪ್ರತಿಕ್ರಿಯಿಸಿ,
ಅವರಿಗೆ ಬಾಗಿಲು ಇಲ್ಲ. ಕಿಡಕಿಯೂ ಇಲ್ಲ. ಎಲ್ಲಾ ಬಟಾಬಯಲು ಎಂದು ತಿರುಗೇಟು ನೀಡಿದರು.