ಬಿಜೆಪಿಯಲ್ಲಿ ಯಾವುದೇ ನಾಯಕ ಬದಲಾವಣೆ ಇಲ್ಲ: ಸಚಿವ ಬಿ.ಸಿ ಪಾಟೀಲ್

ಹೊಸದಿಗಂತ ವರದಿ,ಚಿಕ್ಕೋಡಿ:

ಹಿಜಾಬ ವಿಚಾರವನ್ನು ಸರಿಯಾಗಿ ವಿಶ್ಲೇಷಣೆ ನೀಡಲಾಗದೇ ಕಾಂಗ್ರೇಸ್ ಅಧಿವೇಶನದಲ್ಲಿ ಧರಣಿ ಸತ್ಯಾಗ್ರಹ ಮಾಡಲು ಮಾಂದಾಯ್ತು. ಇನ್ನೂ ರಾಜ್ಯ ಬಿ.ಜೆ.ಪಿಯಲ್ಲಿ ಯಾವುದೇ ನಾಯಕ ಬದಲಾವಣೆ ಇಲ್ಲ. ಸರಕಾರದ ಜನಪರ ಕೆಲಸಗಳನ್ನು ಸಹಿಸಲಾಗದೆ ಗೊಂದಲ ಸೃಷ್ಟಿಗೆ ಇಂತಹ ಉಹಾಪೋಹದಳನ್ನು ಸಹಿಸಲಾಗದವರು ಹಬ್ಬಿಸುತ್ತಿದ್ದಾರೆ ಎಂದು ವಿಪಕ್ಷಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ ಟಾಂಗ್ ಕೊಟ್ಟರು.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿನಡೆದ ಕೃಷಿ ವಿಜ್ಞಾನ ಮತ್ತು ಸೋಯಾ, ಕಬ್ಬು ಬೆಳೆ ಉದ್ಯವಿಗಳ ಸಮ್ಮೇಳನ ಕಾರ್ಯಕ್ರಮದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

ಕಾಶ್ಮೀರ ಪೈಲ್ ಚಿತ್ರ ವಿಚಾರಚಾಗಿ ಪ್ರತಿಕ್ರಿಯೆ ನೀಡಿದ ಅವರು ದೇಶಭಕ್ತಿ, ರಾಷ್ಟ್ರೀಯ ವಿಚಾರಧಾರೆ ತೋರಿಸುವ ಕಾರ್ಯ ಚಿತ್ರದಿಂದ ನಡೆದಿದೆ‌. ಈ ಚಿತ್ರದಲ್ಲಿ ಯಾವದೇ ಕೋಮುಗಲಭೆ ಇಲ್ಲ.ಕಾಂಗ್ರೇಸ್ ಕೆಲವರನ್ನು ಇಟ್ಟುಕೊಂಡು ಕೋಮುಗಲಭೆ ಸೃಷ್ಟಿ ಮಾಡುತ್ತಿದೆ ಎಂದು ತಿರುಗು ಬಾಣ ಬಿಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!