ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಡೈರೆಕ್ಟರ್ ಜೋಗಿ ಪ್ರೇಮ್ ತೀವ್ರವಾಗಿಯೇ ಖಂಡಿಸಿದ್ದಾರೆ.
ನಾನು ಮತ್ತು ಗುಂಡ-2 ಚಿತ್ರದ ಪ್ರೆಸ್ ಮೀಟ್ ನಲ್ಲಿ ಪ್ರೇಮ್ ತಮ್ಮ ಆಕ್ರೋಶ ಹೊರಹಾಕಿದ್ದು, ಉಗ್ರರನ್ನ ಸುಮ್ನೆ ಬಿಡಲೇಬಾರದು. ಅವರನ್ನ ಪೀಸ್ ಪೀಸ್ ಮಾಡಿ ಬಿಸಾಕಬೇಕು. ಅಮಾಯಕ ಪ್ರವಾಸಿಗರನ್ನ ಕೊಂದು ಮುಗಿಸಿದ್ದಾರೆ. ಇವರನ್ನ ಸುಮ್ನೆ ಬಿಡಬೇಕಾ? ಯಾಕೆ ಬಿಡಬೇಕು. ಹೋಗಿ ಮೋದಿಯನ್ನ ಕೇಳು ಅಂತಾನಲ್ಲ ಆ ಉಗ್ರ.. ಅವರನ್ನ ಬಿಡಬೇಕಾ? ಚಾನ್ಸೇ ಇಲ್ಲ ಬಿಡಿ ಎಂದು ಖಡಕ್ ಆಗಿ ಹೇಳಿದ್ದಾರೆ.
ಯುದ್ಧಬೇಡ, ಯುದ್ಧಬೇಡ ಅಂತಾರೆ. ಯಾಕೆ ಯುದ್ಧಬೇಡ. ಈ ರೀತಿ ಮಾಡಿದ್ರೆ ಸುಮ್ಮನೆ ಇರಬೇಕಾ..? ಯುದ್ಧ ಬೇಕು. ಯುದ್ಧ ಮಾಡಲೇಬೇಕು. ಯುದ್ಧ ಮಾಡೋದು ಬೇಡ ಅನ್ನುವ ಮಾತೇ ಇಲ್ಲ. ಯಾರ ಬಗ್ಗೆನೂ ಯಾವುದೇ ಎಮೋಷನ್ಸ್ ಬೇಡ್ವೇ ಬೇಡ. ನಮ್ಮ ಮೋದಿ ಅವರು ಇದ್ದಾರೆ. ಅವರು ಇದನ್ನ ಸರಿಯಾಗಿಯೇ ಹ್ಯಾಂಡಲ್ ಮಾಡ್ತಾರೆ ಅಂತ ಹೆಮ್ಮೆಯಿಂದ ಪ್ರೇಮ್ ಹೇಳಿಕೊಂಡಿದ್ದಾರೆ.