ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡ ಇಲ್ಲ: ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಪಡೆದ ರಶ್ಮಿಕಾ ಮಂದಣ್ಣ ಇಂದು ಬಾಲಿವುಡ್, ಟಾಲಿವುಡ್ ನಲ್ಲಿ ತುಂಬಾ ಸದ್ದು ಮಾಡುತ್ತಿದ್ದಾರೆ.
ಬಾಲಿವುಡ್ ನಲ್ಲಿ ಇತ್ತಿಚೇಗೆ ಅಮಿತಾಭ್ ಬಚ್ಚನ್ ಮಗಳಾಗಿ ಅಭಿನಯಿಸಿರುವ ಗುಡ್‌ ಬೈ ಸಿನಿಮಾ ಬಿಡುಗಡೆಯಾಗಿದೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾದರೂ ನೆಟ್ಟಿಗರ ಗಮನ ಸೆಳೆದಿದೆ.

ರಶ್ಮಿಕಾ ಕಿರಿಕ್ ಪಾರ್ಟಿಸೆಟ್‌ನಲ್ಲಿ ರಕ್ಷಿತ್‌ ಶೆಟ್ಟಿ ಭೇಟಿಯಾಗಿ ಪ್ರೀತಿಸಿ , ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರೂ ಮದುವೆ ಆಗುವ ದಿನಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ರಶ್ಮಿಕಾಗೆ ಅದಾಗಲೇ ತೆಲುಗು ಸಿನಿಮಾಗಳಲ್ಲಿ ಚಾನ್ಸ್‌ ಗಿಟ್ಟಿಸಿಕೊಳ್ಳುವ ಹೊಸ್ತಿಲಲ್ಲಿದ್ದರು. ಇನ್ನೇನೂ ರಶ್ಮಿಕಾ ಮತ್ತು ರಕ್ಷಿತ್‌ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನುವಷ್ಟರಲ್ಲೇ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತು. ಎಂಗೇಜ್‌ಮೆಂಟ್‌ ಆದ ಒಂದು ವರ್ಷದ ನಂತರ ಬೇರೆಯಾಗಲು ನಿರ್ಧರಿಸಿದರು.

ಆ ಬಳಿಕ 2020 ರಲ್ಲಿ ವಿಜಯ್ ದೇವರಕೊಂಡ ಅವರೊಂದಿಗೆ ರಶ್ಮಿಕಾ ಗೀತ ಗೋವಿಂದಂ ಚಿತ್ರೀಕರಣ ಮಾಡುವಾಗಲೂ ಅವರ ನಡುವೆ ಕೆಮಿಸ್ಟ್ರಿ ಇತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಹಿಂದಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಮುಕ್ತವಾಗಿ ಮಾತನಾಡಿದ್ದಾರೆ.
ಇಂಟರ್‌ನ್ಯಾಶನಲ್ ಬ್ಯುಸಿನೆಸ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, ‘ಅವರು (ವಿಜಯ್ ದೇವರಕೊಂಡ) ತನ್ನದೇ ಆದ ಜಗತ್ತಿನಲ್ಲಿ ಸಂತೋಷವಾಗಿರುವ ಸರಳ ವ್ಯಕ್ತಿ. ಗೀತ ಗೋವಿಂದಂ ಸಮಯದಲ್ಲಿ ನಾವು ಕೇವಲ ಸ್ನೇಹಿತರಾಗಿದ್ದೇವೆ, ಆದರೆ ನಾವು ನಿರ್ಲಕ್ಷಿಸಲಾಗದ ಒಂದು ರೀತಿಯ ಸ್ಪಾರ್ಕ್‌ ಇತ್ತು. ಕೆಲವೊಮ್ಮೆ, ನನ್ನ ಹೃದಯವು ‘ಅವನು ವಿಶೇಷ, ಅವನು ವಿಶೇಷ’ ಎಂದು ಹೇಳುತ್ತಲೇ ಇರುತ್ತದೆ. ಆದರೆ, ನಾವು ಡಿಯರ್ ಕಾಮ್ರೇಡ್‌ನಲ್ಲಿ ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಕೆಮೆಸ್ಟ್ರಿ ಬದಲಾಯಿತುಎಂದಿದ್ದಾರೆ.

ರಕ್ಷಿತ್ ಜೊತೆಗಿನ ಬ್ರೇಕಪ್‌ ನಂತರ ನಟ ವಿಜಯ್‌ ದೇವರಕೊಂಡ ತನ್ನನ್ನು ಹೇಗೆ ಸಮಾಧಾನಪಡಿಸಿದರು ಎಂಬುದರ ಕುರಿತು ರಶ್ಮಿಕಾ ಮಾತನಾಡಿದ್ದು, ಒಂದು ಹಂತದಲ್ಲಿ, ನಾನು ವಿಜಯ್ ದೇವರಕೊಂಡ ಅವರಿಗೆ ನನ್ನ ಪ್ರೀತಿಯನ್ನು ಒಪ್ಪಿಕೊಂಡೆ, ಆದರೆ ಅವರು ಆರಂಭದಲ್ಲಿ ಹಿಂಜರಿದರು. ಆದರೆ ಅವರಿಗೂ ನನ್ನ ಬಗ್ಗೆ ವಿಶೇಷ ಭಾವನೆ ಇತ್ತು. ಆದ್ದರಿಂದ, ಅವರು ಒಪ್ಪಿಕೊಂಡರು ಮತ್ತು ನಮ್ಮ ಪ್ರೀತಿಯು ಅರಳಿದ ರೀತಿಯಲ್ಲಿ ನಾವು ಸಂತೋಷವಾಗಿದ್ದೇವೆ. ಅವರು ನನ್ನ ಮಾಜಿ ಗೆಳೆಯ ರಕ್ಷಿತ್ ಶೆಟ್ಟಿಯಂತೆ ಅಸುರಕ್ಷಿತ ವ್ಯಕ್ತಿಯಲ್ಲ ಅಥವಾ ನನ್ನ ವೃತ್ತಿಜೀವನವನ್ನು ತ್ಯಾಗ ಮಾಡುವಂತೆ ಸೂಚಿಸುವುದಿಲ್ಲ. ಅವರು ಮುಕ್ತ ಮನಸ್ಸಿನ ವ್ಯಕ್ತಿ ಮತ್ತು ನಾನು ಶಾಶ್ವತವಾಗಿ ಸ್ವತಂತ್ರನಾಗಿರಬೇಕೆಂದು ಬಯಸುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.
ಮದುವೆಯ ಯೋಜನೆಗಳ ಬಗ್ಗೆ ಕೇಳಿದಾಗ ನಟಿ ರಶ್ಮಿಕಾ,ಮುಂದಿನ 5-7 ವರ್ಷಗಳವರೆಗೆ ಮದುವೆ ಯೋಜನೆ ಇಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!