ಕಲ್ಲಾಮೆಗಳ ಹಿಡಿದು, ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳ ಬಂಧನ

ಹೊಸದಿಗಂತ ವರದಿ, ಮುಂಡಗೋಡ:

ಬಾಚಣಕಿ ಡ್ಯಾಂನಲ್ಲಿ ಕಲ್ಲಾಮೆಗಳನ್ನು ಹಿಡಿದು, ಮಾರಾಟ ಮಾಡಲು ಯತ್ನಿಸಿದ್ದ, ಇಬ್ಬರು ಆರೋಪಿಗಳನ್ನು ದಾಂಡೇಲಿಯ ಅರಣ್ಯ ಸಂಚಾರಿ ದಳದವರು ಬಂಧಿಸಿದ ಘಟನೆ, ಪಟ್ಟಣದ ಎಪಿಎಂಸಿ ಗೇಟ್ ಹತ್ತಿರ ಗುರುವಾರ ಜರುಗಿದೆ.

ಹುನಗುಂದ ಗ್ರಾಮದ ಚಂದ್ರಗೌಡ ಯಲ್ಲಪ್ಪಗೌಡ ಹನಮಂತಗೌಡ(54) ಹಾಗೂ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ವಾಟರಮೆನ್ ಕೆಲಸ ಮಾಡುವ ಚೆನ್ನಪ್ಪ ಲಮಾಣಿ(52) ಬಂಧಿತ ಆರೋಪಿಗಳು, ಬಂಧಿತರಿಂದ ಒಂದು ಜೀವಂತ ಕಲ್ಲಾಮೆ, ನಾಲ್ಕು ಜೀವಂತ ನೀರಾಮೆಗಳನ್ನು ಅರಣ್ಯ ಸಂಚಾರಿ ವಶಪಡಿಸಿಕೊಂಡಿದ್ದಾರೆ.

ದಳದವರು ದಾಂಡೇಲಿಯ ಅರಣ್ಯ ಸಂಚಾರಿ ದಳದ ಪಿಎಸ್‌ಐ ಈ.ಸಿ.ಸಂಪತ್ತ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಜಾನನ ನಾಯ್ಕ, ಶಮೀರ್ ಲೋಹಾನಿ, ಎಮ್.ಬಿ.ಮುಲ್ಲಾ, ಚಂದ್ರಶೇಖರ ನಾಯ್ಕ, ಪ್ರಶಾಂತ ನಾಯ್ಕ, ಕರಿಯಣ್ಣ ತಿಮ್ಮಯ್ಯ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!