ಪರಿಷತ್ ಚುನಾವಣೆಯ ಹಿಂದಿನ ದಿನವೇ ಕಾಂಚಾಣ ಸದ್ದು: 17.40 ಲಕ್ಷ ನಗದು ಪತ್ತೆ

ಹೊಸದಿಗಂತ ವರದಿ, ವಿಜಯಪುರ:

ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಚುನಾವಣೆ ಹಿಂದಿನ ದಿನವೇ ವಾಹನದಲ್ಲಿ ಮತದಾರರಿಗೆ ಅಕ್ರಮ ಹಣ ಹಂಚಲು ಹೊರಟಿದ್ದ ಮೂವರು, ನಗರದ ಗೋದಾವರಿ ಹೋಟೆಲ್ ಬಳಿ ಚುನಾವಣೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು,
ವಾಹನದಲ್ಲಿ 17.40 ಲಕ್ಷ ರೂ.ಗಳು ಪತ್ತೆಯಾಗಿವೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಸೇರಿದ್ದು ಎನ್ನಲಾಗುತ್ತಿರುವ ಈ ಹಣವನ್ನು 6 ಜನರು, ಮತದಾರರಿಗೆ ಹಂಚಿಕೆ ಮಾಡಲು ತೆರಳುತ್ತಿದ್ದಾಗ, ಚುನಾವಣಾ ಅಧಿಕಾರಿ ಎ.ಎಸ್. ಕೊಲ್ಹಾರ ನೇತೃತ್ವದ ತಂಡಕ್ಕೆ, 3 ಜನರು ಸಿಕ್ಕಿ ಬಿದ್ದಿದ್ದು, 3 ಜನರು ಪರಾರಿಯಾಗಿದ್ದಾರೆ.

ಹಣದ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಯ ಭಾವಚಿತ್ರವಿರುವ ಕರ ಪತ್ರಗಳಿದ್ದು, ಒಟ್ಟು 17.40 ಲಕ್ಷ ರೂ. ಪೈಕಿ ಒಂದೊಂದು ಪಾಕಿಟ್ ನಲ್ಲೂ10 ಸಾವಿರ ರೂ.ಸಿಕ್ಕಿದೆ. ಒಟ್ಟು 174 ಪಾಕಿಟ್ ಇದ್ದು, ಈ ಮೂಲಕ ಒಂದು ಮತಕ್ಕೆ10 ಸಾವಿರ ರೂ. ಅಕ್ರಮವಾಗಿ ಹಂಚಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!