ಆಪರೇಷನ್​ ಕಾವೇರಿ ಯಶಸ್ವಿ: ಸಂಘರ್ಷಪೀಡಿತ ಸುಡಾನ್​​ನಿಂದ ತವರಿಗೆ ಮರಳಿದ 3,800 ಭಾರತೀಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಯುದ್ಧ ಪೀಡಿತ ಸುಡಾನ್‌ನಿಂದ ಇಲ್ಲಿಯವರೆಗೂ ಆಪರೇಷನ್ ಕಾವೇರಿ ಅಡಿಯಲ್ಲಿ ಸುಮಾರು 3,800 ಮಂದಿಯನ್ನು ಸುರಕ್ಷಿತವಾಗಿ ಮತ್ತು ಸಂಪೂರ್ಣವಾಗಿ ಭಾರತಕ್ಕೆ ಕರೆತರಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, 47 ಭಾರತೀಯರೊಂದಿಗೆ ಭಾರತೀಯ ವಾಯುಪಡೆಯ C-130J ವಿಮಾನವು ಜೆಡ್ಡಾದಿಂದ ದೆಹಲಿಗೆ ಹೊರಟಿದೆ. ಈ ಮೂಲಕ ಆಪರೇಷನ್ ಕಾವೇರಿ ಅಡಿಯಲ್ಲಿ ಸುಮಾರು 3800 ಜನರನ್ನು ಈಗ ಸುಡಾನ್‌ನಿಂದ ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಗುರುವಾರ ಸುಡಾನ್‌ನಿಂದ 192 ಭಾರತೀಯರು ಅಹಮದಾಬಾದ್‌ಗೆ ಬಂದಿಳಿದಿದ್ದು, ಅವರನ್ನು ಭಾರತೀಯ ವಾಯುಪಡೆಯ C17 ವಿಮಾನದಲ್ಲಿ ಗುಜರಾತ್‌ಗೆ ಕರೆತರಲಾಯಿತು. ಅದೇ ದಿನ 20 ಭಾರತೀಯರ ಎರಡು ಬ್ಯಾಚ್‌ 18 ವಿಮಾನಗಳಲ್ಲಿ ಚೆನ್ನೈ ಮತ್ತು ಬೆಂಗಳೂರಿಗೆ ಬಂದಿದ್ದಾರೆ.

ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಒಂಬತ್ತು ದಿನಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ಆಪರೇಷನ್ ಕಾವೇರಿ ಅಡಿಯಲ್ಲಿ ಒಟ್ಟು 3,584 ಭಾರತೀಯರನ್ನು ಯುದ್ಧ ಪೀಡಿತ ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!