‘ಆಪರೇಷನ್ ಕಾವೇರಿ’, ದೆಹಲಿಗೆ ವಿಮಾನದಲ್ಲಿ ಆಗಮಿಸಿದ 360 ಭಾರತೀಯರ ಮೊದಲ ತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಘರ್ಷ ಪೀಡಿತ ಸುಡಾನ್‌ನಿಂದ 360 ಭಾರತೀಯರ ಮೊದಲ ತಂಡ ನಿನ್ನೆ ರಾತ್ರಿ ರಾಜಧಾನಿ ದೆಹಲಿಗೆ ಬಂದಿಳಿದಿದೆ.
ಈಗಾಗಲೇ ಆಪರೇಷನ್ ಕಾವೇರಿ ಹೆಸರಿನಲ್ಲಿ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಾಗುತ್ತಿದೆ.

ಸುಡಾನ್ ಸೇನೆ, ಅರೆಸೈನಿಕ ಗುಂಪುಗಳು ಹೋರಾಡುತ್ತಿರುವ ಸುಡಾನ್‌ನಲ್ಲಿ ಸಾಕಷ್ಟು ಭಾರತೀಯರು ಸಿಲುಕಿದ್ದಾರೆ. ಇವರನ್ನು ಭಾರತಕ್ಕೆ ವಾಪಾಸ್ ಕರೆತರಲು ಸರ್ಕಾರ ಆಪರೇಷನ್ ಕಾವೇರಿ ಕಾರ್ಯಾಚರಣೆ ಆರಂಭಿಸಿದೆ.

ನಿನ್ನೆಯಷ್ಟೇ ನೌಕಾಪಡೆಯ ಹಡಗು ಸುಡಾನ್‌ನಿಂದ 278 ನಾಗರಿಕರನ್ನು ರಕ್ಷಿಸಿ ದೇಶಕ್ಕೆ ಕರೆತಂದಿತ್ತು.ಇದೀಗ ನಾಗರಿಕರನ್ನು ಹೊತ್ತ ಮೊದಲ ವಿಮಾನ ದೆಹಲಿಗೆ ಬಂದಿದ್ದು, ಒಟ್ಟಾರೆ ಸುರಕ್ಷಿತವಾಗಿ ಬಂದಿಳಿದವರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ.

ಏಪ್ರಿಲ್ ಮಧ್ಯದಿಂದ ಸುಡಾನ್‌ನ ಸೈನ್ಯ ಮತ್ತು ಕ್ಷಿಪ್ರ ಬೆಂಬಲ ಪಡೆಗಳ ಅರೆಸೈನಿಕ ನಡುವೆ ಯುದ್ಧ ಆರಂಭವಾಗಿದ್ದು, 459 ಜನರು ಮೃತಪಟ್ಟಿದ್ದಾರೆ, ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!