ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಕಬೀರ, ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಕಳೆದ ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇಬ್ರಾಹಿಂ ಬೆಳಗ್ಗೆ 6:30ಕ್ಕೆ ನಿಧನರಾಗಿದ್ದಾರೆ.
1940 ಮೇ 10ರಂದು ಬಾಗಲಕೋಟೆಯಲ್ಲಿ ಜನಿಸಿದವರು ಇಬ್ರಾಹಿಂ ಸುತಾರ. ಸಮಾಜದಲ್ಲಿ ಕೋಮು-ಧ್ವೇಷ, ಜಾತಿ ಧರ್ಮದ ಬಗ್ಗೆ ಸಾಮರಸ್ಯದ ಪ್ರಚಾರ ಮಾಡಿದ್ದಾರೆ.
ಇಬ್ರಾಹಿಂ ಅವರು ವೈದಿಕ, ವಚನ ಹಾಗೂ ಸೂಫಿ ಪರಂಪರೆಗಳನ್ನು ತಮ್ಮ ಭಜನೆ, ಪ್ರವಚನಗಳ ಮೂಲಕ ಭಾವೈಕ್ಯತೆ ಮೂಡಿಸುತ್ತಿದ್ದರು.
ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 2018ಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.