ಉದಯ್​​ಪುರ ಹಿಂದು ಹತ್ಯೆ ಹಿಂದೆ ಪಾಕ್ ಕೈವಾಡ: ಇಸ್ಲಾಮಿ ಸಂಘಟನೆಯ 40 ಜನರಿಗಾಗಿ NIA ಶೋಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉದಯ್​ಪುರದ ಹಿಂದು ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ವೇಳೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿ ಹೊರಬೀಳಲು ಶುರುವಾಗಿವೆ.
ಸದ್ಯದ ಮಾಹಿತಿ ಪ್ರಕಾರ ದಾವತ್​-ಎ-ಇಸ್ಲಾಮಿ ಸಂಘಟನೆಗೆ ಸಂಬಂಧಿಸಿದ 40 ಮಂದಿಗೋಸ್ಕರ ಎನ್​ಐಎ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.ಇವರಿಗೆಲ್ಲ ಪಾಕಿಸ್ತಾನದಿಂದ ಆನ್​ಲೈನ್​ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.
ಎನ್​ಐಎ ಮತ್ತು ಎಸ್​​ಐಟಿ ತಂಡ ಮೊಬೈಲ್​ ಸಂಖ್ಯೆ ಆಧಾರದ ಮೇಲೆ 40 ಜನರನ್ನ ಗುರಿಯಾಗಿಸಿದ್ದು, ಅವರಿಗೋಸ್ಕರ ಶೋಧಕಾರ್ಯ ಆರಂಭಗೊಂಡಿದೆ.
ಈ ಲಿಸ್ಟ್​ನಲ್ಲಿರುವ 40 ಮಂದಿ ರಾಜಸ್ಥಾನದ ಆರು ಜಿಲ್ಲೆಗಳಿಗೆ ಸೇರಿದ್ದು, ಕಳೆದ ಒಂದು ವರ್ಷದಿಂದ ದಾವತ್​ – ಎ – ಇಸ್ಲಾಮಿ ಸಂಘಟನೆ ಜೊತೆ ಗುರುತಿಸಿಕೊಂಡಿದ್ದರಂತೆ. ಇವರಿಗೆ ವಾಟ್ಸ್​ಆ್ಯಪ್​ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್​​ನಿಂದ ತರಬೇತಿ ನೀಡಲಾಗುತ್ತಿತ್ತು ಎಂದು ಹೇಳಲಾಗ್ತಿದೆ.
ನೂಪುರ್​ ಶರ್ಮಾ ಅವರನ್ನ ಬೆಂಬಲಿಸಿ ಪೋಸ್ಟ್ ಮಾಡಿದವರ ಶಿರಚ್ಛೇದ ಮಾಡಲು ಪಾಕಿಸ್ತಾನದಿಂದಲೇ ತರಬೇತಿ ನೀಡಲಾಗಿತ್ತು ಎಂದು ಎನ್​ಐಎ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಗೌಸ್ ಮೊಹಮ್ಮದ್​ ಹಾಗೂ ಮೊಹಮ್ಮದ್ ರಿಯಾಜ್​​ ಈಗಾಗಲೇ ಬಂಧನವಾಗಿದ್ದು, ಅವರಿಂದ ಮಹತ್ವದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!