ಕನ್ಹಯ್ಯಾ ಲಾಲ್ ಬರ್ಬರ ಹತ್ಯೆ ಹಿಂದೆ ಪಾಕಿಸ್ತಾನಿ ಹ್ಯಾಂಡ್ಲರ್ ಗಳ ಕೈವಾಡ??

ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ತಾನದ ಉದಯಪುರದಲ್ಲಿ ಹಿಂದು ದರ್ಜಿಯೊಬ್ಬನನ್ನು ಅಮಾನುಷವಾಗಿ ಹತ್ಯೆ ಮಾಡಿದ ಇಬ್ಬರು ಹಂತಕರನ್ನು ಈಗಾಗಲೇ ಬಂಧಿಸಲಾಗಿದ್ದು ಹೆಚ್ಚಿನ ತನಿಖೆಗಾಗಿ ಅವರನ್ನೀಗ ಎನ್‍ಐ‍ಎ ಕೈಗೆ ಒಪ್ಪಿಸಲಾಗಿದೆ.

ಶನಿವಾರ ಮುಂಜಾನೆ, ಎನ್ಐಎ ತಂಡವು ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಹೈ ಸೆಕ್ಯುರಿಟಿ ಜೈಲಿಗೆ ತಲುಪಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ಇದೀಗ ಅವರನ್ನು ಭಾರೀ ಭದ್ರತೆಯಲ್ಲಿ ಜೈಪುರಕ್ಕೆ ಸಾಗಿಸಲಾಗುತ್ತಿದೆ.

ಈ ನಡುವೆ ಬಂಧಿತ ಹಂತಕರಾದ ರಿಯಾಜ್ ಮತ್ತು ಘೌಸ್ ಮುಹಮ್ಮದ್ ಅವರನ್ನು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳಾದ ಸಲ್ಮಾನ್ ಹೈದರ್ ಮತ್ತು ಅಬು ಇಬ್ರಾಹಿಂ ಎಂಬಿಬ್ಬರು ಪ್ರಚೋದಿಸುತ್ತಿದ್ದರು. ಭಾರತದಲ್ಲಿ “ದೊಡ್ಡದಾಗಿ” ಏನನ್ನೋ ಮಾಡಲು ಸಂಚು ರೂಪಿಸುತ್ತಿದ್ದರು ಅದಕ್ಕೆ ಅವರಿಬ್ಬರಿಗೆ ಪಾಕಿಸ್ತಾನಿ ಮೂಲದ ಹ್ಯಾಂಡ್ಲರ್ ಗಳು ಪ್ರಚೋದನೆ ನೀಡುತ್ತಿದ್ದರು ಎನ್ನಲಾಗಿದೆ.

ಇಂಡಿಯಾ ಟುಡೇ ವರದಿ ಪ್ರಕಾರ ಮುಹಮ್ಮದ್ ರಿಯಾಜ್ ಮತ್ತು ಘೌಸ್ ಮುಹಮ್ಮದ್ ಭಯೋತ್ಪಾದಕ ದಾಳಿಗಳನ್ನು ನಡೆಸಲು ಆರ್‌ಡಿಎಕ್ಸ್‌ನಂತಹ ಸ್ಫೋಟಕಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇಬ್ಬರೂ “ಏನಾದರೂ ದೊಡ್ಡದನ್ನು ಮಾಡುವ” ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!