ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನ ವಿಸಾಖಾದಿಂದ ಸಾಲೂರಿಗೆ ತೆರಳುತ್ತಿದ್ದ ಆರ್ಟಿಸಿ ಅಲ್ಟ್ರಾ ಡಿಲಕ್ಸ್ ಬಸ್ವೊಂದರಲ್ಲಿ ಮಳೆ ಸುರಿಯುತ್ತಿದ್ದು, ಜನ ಛತ್ರಿ ಹಿಡಿದು ಕೂತಿದ್ದಾರೆ. ಮಳೆಯಿಂದ ತಪ್ಪಿಸಿಕೊಂಡು ಆರಾಮಾಗಿ ಓಡಾಡಲು ಬಸ್ ಜರ್ನಿ ಮಾಡುತ್ತಾರೆ. ಆದರೆ ಬಸ್ನಲ್ಲೇ ಮಳೆ ಬಂದರೆ ಹೇಗೆ ಎಂದು ಪ್ರಯಾಣಿಕರು ಶಪಿಸಿದ್ದಾರೆ.
ಈ ರೀತಿ ಹಿಂದೆಲ್ಲೂ ನೋಡಿಲ್ಲ, ಮನೆ ಸೋರೋದು ಕಂಡಿದ್ದೇವೆ ಆದರೆ ಬಸ್ನಿಂದ ನೀರು ಸೋರುತ್ತಿದೆ. ಛತ್ರಿ ತಂದವರೇನೋ ಹಿಡಿದುಕೊಂಡು ಕೂತಿದ್ದಾರೆ ಆದರೆ ನಾವು ಏನು ಮಾಡೋದು ಎಂದು ಛತ್ರಿ ಇಲ್ಲದ ಪ್ರಯಾಣಿಕರು ಸಿಟ್ಟಾಗಿದ್ದಾರೆ.
ಇದು ಆರ್ಟಿಸಿ ಗಮನಕ್ಕೆ ಬಂದಿದ್ದು, ಸೋರುತ್ತಿರುವ ಬಸ್ಗಳ ದುರಸ್ತಿ ಕಾರ್ಯ ನಡೆಸಲಾಗಿದೆ. ಸೋರಿಕೆ ಇರುವ ಬಸ್ಗಳನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.