ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ವಿಶೇಷ ನ್ಯಾಯಾಲಯವು ಪತ್ರಾ ಚಾವ್ಲ್ ಹಗರಣ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಇಡಿ ಕಸ್ಟಡಿಯನ್ನು ಆಗಸ್ಟ್ 8 ರವರೆಗೆ ವಿಸ್ತರಿಸಿದೆ.
ಸೋಮವಾರ ನ್ಯಾಯಾಲಯ ನೀಡಿದ್ದ ರಾವುತ್ ಅವರ ಕಸ್ಟಡಿ ಗುರುವಾರ ಅಂತ್ಯಗೊಳ್ಳಬೇಕಿತ್ತು. ಅವರೀಗ ಇಡಿ ಕಸ್ಟಡಿಯಲ್ಲಿದ್ದು ಆ.8ವರೆಗೆ ಅದನ್ನು ವಿಸ್ತರಿಸಲಾಗಿದೆ.
ಉಪನಗರ ಗೋರೆಗಾಂವ್ನಲ್ಲಿನ ಪತ್ರಾ ‘ಚಾಲ್’ (ಹಳೆಯ ಸಾಲು ವಠಾರ) ಮರುಅಭಿವೃದ್ಧಿ ಹಗರಣ ಮತ್ತು ಆಸ್ತಿ ವಹಿವಾಟುಗಳಲ್ಲಿ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಸಂಸ್ಥೆ ಇಡಿಯು ರವಿವಾರ ರಾತ್ರಿ ಸಂಜಯ್ ರಾವುತ್ ಅವರನ್ನು ಬಂಧಿಸಿತ್ತು.