ಚಿರಂಜೀವಿಗೆ ಇಂಡಿಯಾ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್ ಪುರಸ್ಕಾರ: ಪವನ್‌ ಕಲ್ಯಾಣ್‌ ಮನದಾಳದ ಮಾತೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಗಾಸ್ಟಾರ್ ಚಿರಂಜೀವಿಗೆಗೆ ಭಾರತ ಸರ್ಕಾರದಿಂದ ದೊರೆತ ಗೌರವದ ಕುರಿತು ಜನಸೇನಾ ಮುಖ್ಯಸ್ಥ ಹಾಗೂ ಚಿರು ಸಹೋದರ ಪವನ್ ಕಲ್ಯಾಣ್ ಅಭಿನಂದನೆ ಸಲ್ಲಿಸಿದರು. ಭಾನುವಾರ ಗೋವಾದಲ್ಲಿ ಭಾರತದ 53ನೇ ಚಲನಚಿತ್ರೋತ್ಸವದ ಸಂಭ್ರಮಾಚರಣೆ ಆರಂಭವಾಗಿದೆ. ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೇ ತಿಂಗಳ 28ರವರೆಗೆ ನಡೆಯಲಿದೆ. ಟಾಲಿವುಡ್ ಸ್ಟಾರ್ ರೈಟರ್ ವಿಜಯೇಂದ್ರ ಪ್ರಸಾದ್ ಮತ್ತು ಬಾಲಿವುಡ್ ಸ್ಟಾರ್ ಹೀರೋ ಅಜಯ್ ದೇವಗನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಬಾರಿಯ 53ನೇ ಚಿತ್ರೋತ್ಸವದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಅಪರೂಪದ ಗೌರವ ಲಭಿಸಿದೆ. ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು 2022 ರ “ಇಂಡಿಯಾ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್ ಪುರಸ್ಕಾರ”ಘೋಷಿಸಲಾಗಿದೆ. ತನ್ನ ಸಹೋದರನಿಗೆ ಇಂತಹ ಗೌರವ ಲಭಿಸಿದ್ದಕ್ಕಾಗಿ ಪವನ್ ಕಲ್ಯಾಣ್ ಚಿರಂಜೀವಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

“ಅಂತಾರಾಷ್ಟ್ರೀಯ ಚಲನಚಿತ್ರ ವೇದಿಕೆಯಲ್ಲಿ ಸಹೋದರ ಚಿರಂಜೀವಿ ಅವರಿಗೆ ಈ ಗೌರವ ಸಿಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಭಾರತ ಸರ್ಕಾರ ಘೋಷಿಸಿರುವ ಈ ಪ್ರಶಸ್ತಿ ಅಣ್ಣಯ್ಯ ಅವರ ಕೀರ್ತಿ ಕಿರೀಟದಲ್ಲಿ ಮತ್ತೊಂದು ವಜ್ರವಾಗಿದೆ’’ ಎಂದರು.

Image

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!