‘ಪೇ ಸಿಎಂ ಅಭಿಯಾನ ಕಾಂಗ್ರೆಸ್ ಪಕ್ಷದ ನೀಚ ರಾಜಕೀಯ’

ಹೊಸದಿಗಂತ ವರದಿ ಕಲಬುರಗಿ:

ಪೇ ಸಿಎಂ ಅಭಿಯಾನ ಕಾಂಗ್ರೆಸ್,ನ ನೀಚ ಮಟ್ಟದ ರಾಜಕೀಯವಾಗಿದ್ದು, ಕಾಂಗ್ರೆಸ್ ಪಕ್ಷ ಸಿಎಂ ಪದಕ್ಕೆ ಅಪಮಾನ ಮಾಡುವಷ್ಟು ಕೀಳು ಮಟ್ಟದ ರಾಜಕೀಯಕ್ಕೆ ಇಳಿಯುತ್ತದೆ ಎಂದುಕೊಂಡಿರಲಿಲ್ಲ ಎಂದು ಬಿಜೆಪಿ ಮುಖಂಡ ಗುಂಡು ಮತ್ತಿಮಡು ತಿಳಿಸಿದ್ದಾರೆ.

ಬಿಜೆಪಿಗೆ ಶೇ,40 % ಕಮಿಷನ್ ಪಡೆದಿರುವ ಆರೋಪ ಮಾಡುತ್ತಿರುವ ಕಾಂಗ್ರೆಸ್, ಈವರೆಗೂ ಒಂದು ಪ್ರಕರಣದಲ್ಲಿಯೂ ಸಹ ದಾಖಲೆ ನೀಡಲು ಸಾಧ್ಯವಾಗಿಲ್ಲ ಎಂದರು. ಕಾಂಗ್ರೆಸ್ ಹೇಳುತ್ತಿರುವುದು ಸತ್ಯವಿದ್ದಲ್ಲಿ ದಾಖಲೆ ಬಿಡುಗಡೆ ಮಾಡಲಿ ಎಂದು ಬಿಜೆಪಿ ಮುಖಂಡ ಗುಂಡು ಮತ್ತಿಮೂಡ ಸವಾಲು ಹಾಕಿದ್ದಾರೆ.

ಓಟಿಗಾಗಿ ಬಿಜೆಪಿ ವಿರುದ್ಧ ಶೇ. 40 ಕಮಿಷನ್ ಆರೋಪ ಮಾಡುತ್ತಿರುವ ಕಾಂಗ್ರೆಸ್, ಗೆ ಮುಂದಿನ ಚುನಾವಣೆಯಲ್ಲಿ ಈಗ ಪಡೆದ ಮತಗಳು ಶೇ.40 ರಷ್ಟು ಬರುವುದಿಲ್ಲ ಎಂದರು.

ಪೇಸಿಎಂ ಪೋಸ್ಟರ ಹಚ್ಚಿದ್ದವರ ವಿರುದ್ಧ ಸರಕಾರ ಕ್ರಮಕೈಗೊಂಡಿದ್ದನ್ನು ಸ್ವಾಗತಿಸಬೇಕಿದ್ದ, ಕಾಂಗ್ರೆಸ್ ನಾಯಕರು ತಾವೇ ಪೋಸ್ಟರ ಹಾಕುತ್ತೇವೆ ಎಂದು ಹೇಳಿಕೆ ನೀಡಿದ್ದು, ಇಷ್ಟು ನೀಚ ಮಟ್ಟದ ರಾಜಕೀಯಕ್ಕೆ ಕಾಂಗ್ರೆಸ್ ನಾಯಕರು ಮುಂದಾಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!