ಬಡವರ ಪರ ನೀತಿಗಳಿಗೆ ಜನ ಬೆಂಬಲಿಸಿದ್ದಾರೆ : ಎಚ್.ಕೆ.ಪಾಟೀಲ

ಹೊಸ ದಿಗಂತ ವರದಿ, ಗದಗ :

ಆಶೀರ್ವಾದದ ಫಲವಾಗಿ ಬರುವ ಸ್ಥಾನ ಮಾನವನ್ನು ಅಸ್ತ್ರದಂತೆ ಬಳಕೆ ಮಾಡಿ ಜನರ ಸೇವೆ ಮಾಡುತ್ತೇನೆ ಎಂದು ಗದಗ ಮತಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.

ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಮುಗಿದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿ, ಕರ್ನಾಟಕದಲ್ಲಿ ಬಹುದೊಡ್ಡ ಬದಲಾವಣೆಗೆ ಈ ಚುನಾವಣೆ ಕಾರಣವಾಗಲಿದೆ. ಈ ಚುನಾವಣೆಯ ಸಂದೇಶ ಮೋದಿಯವರ ಆಡಳಿತದ ಅಂತ್ಯ ಎಂದು ಹೇಳಬಹುದು ಎಂದು ಹೇಳಿದರು.

ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲಿ ಎಚ್. ಕೆ. ಪಾಟೀಲ ಮತ್ತು ಎಂ.ಬಿ. ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ
ಶಾಸಕಾಂಗ ಸಭೆಯಾಗುತ್ತೆ.. ಹೈಕಮಾಂಡ್ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ. ವರಿಷ್ಠರ ನಿರ್ಧಾರಕ್ಕೆ ನಾವೇಲ್ಲರೂ ತಲೆ ಬಾಗುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!