ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ತ್ರಿವೇಣಿಯಿಂದ ಮರಳಿ ಬರುತ್ತಿದ್ದ ಭಾರತೀಯ ಯಾತ್ರಾರ್ಥಿಗಳ ಬಸ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಪಲ್ಟಿಯಾಗಿದ್ದು, 60 ಪ್ರಯಾಣಿಕರು ಗಾಯಗೊಂಡಿದ್ದಾರೆ .
ಗೋರಖ್ಪುರ ಜಿಲ್ಲೆಯ ಪಿಪಿಗಂಜ್ ಮತ್ತು ಕ್ಯಾಂಪಿರ್ಗಂಜ್ನಿಂದ ಬಸ್ನಲ್ಲಿ 70 ಭಕ್ತರು ಇದ್ದರು.ಥುತಿಬರಿ ಗಡಿಯಿಂದ 500 ಮೀ ದೂರದಲ್ಲಿರುವ ಭಾರತ-ನೇಪಾಳ ಗಡಿಯಲ್ಲಿ ಈ ಘಟನೆ ನಡೆದಿದೆ.
ಗಾಯಾಳುಗಳನ್ನು ನೇಪಾಳದ ನವಲ್ ಪರಾಸಿ ಜಿಲ್ಲೆಯ ಪೃಥ್ವಿ ಚಂದ್ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.