ಉಗ್ರಗಾಮಿ ದೇಶ ತೊರೆಯಲು ಸಿಎಂ ವಿಜಯನ್ ನೆರವು: ಸ್ವಪ್ನ ಹೊಸ ಬಾಂಬ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಟಲೈಟ್ ಮೊಬೈಲ್ ಹೊಂದಿದ್ದ ಉಗ್ರಗಾಮಿಯೊಬ್ಬ ಭಾರತದಿಂದ ಪರಾರಿಯಾಗಲು ಸಿಎಂ ಪಿಣರಾಯಿ ವಿಜಯನ್ ನೆರವು ನೀಡಿದ್ದಾರೆ ಎಂದು ಸ್ವಪ್ನ ಸುರೇಶ್ ಆರೋಪಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ವಿಜಯನ್ ಅವರ ನಿಕಟವರ್ತಿಯಾಗಿದ್ದ ಸ್ವಪ್ನ ಸುರೇಶ್, ಸ್ಯಾಟಲೈಟ್ ಮೊಬೈಲ್‌ನೊಂದಿಗೆ ಯುಎಇ ಪ್ರಜೆ ಭಾರತದಿಂದ ಪರಾರಿಯಾಗಲು ಸಿಎಂ ಪಿಣರಾಯಿ ವಿಜಯನ್ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

2017ರ ಜುಲೈ 4ರಂದು ತುರಾಯ ಕಂಪನಿಯ ಸ್ಯಾಟಲೈಟ್ ಮೊಬೈಲ್ ಹೊಂದಿದ್ದ ಯುಎಇ ಪ್ರಜೆಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆದರೆ, ಸಿಎಂ ವಿಜಯನ್ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಪರಿಣಾಮ ಆ ಉಗ್ರಗಾಮಿ ಭಾರತ ತೊರೆಯುವಲ್ಲಿ ಯಶಸ್ವಿಯಾಗಿದ್ದಾನೆಂದು ಆರೋಪಿಸಿದರು.

ಸಿಐಎಸ್‌ಎಫ್ ಅಧಿಕಾರಿಗಳು ಯುಎಇ ಪ್ರಜೆ ವಶಕ್ಕೆ ಪಡೆದಿರುವ ಕುರಿತು ಜುಲೈ 4ರಂದೇ ಯುಎಇ ಧೂತವಾಸದಿಂದ ಅಧಿಕಾರಿಯೊಬ್ಬರು ನನಗೆ ದೂರವಾಣಿ ಕರೆ ಮಾಡಿ ಈ ವಿಷಯ ಕುರಿತು ಸಿಎಂ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಲು ಸೂಚಿಸಿದರು. ಈ ಹಿನ್ನೆಲೆಯಲ್ಲಿ ನಾನು ಸಿಎಂ ಕಾರ್ಯದರ್ಶಿ ಎಂ. ಶಿವಶಂಕರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಇದಕ್ಕೆ ಶಿವಶಂಕರ್ ಅವರು ತಾವು ವಿಜಯನ್ ಅವರಿಗೆ ಈ ವಿಚಾರನ್ನು ತಿಳಿಸುತ್ತೇನೆಂದು ಹೇಳಿದರು. ಇದಾದ 10 ನಿಮಿಷಗಳ ಬಳಿಕ ಶಿವಶಂಕರ್ ನನಗೆ ಕರೆ ಮಾಡಿ, ಗೋಪಾಲಕೃಷ್ಣನ್ ವಾರಿಯರ್ ಎಂಬ ಅಧಿಕಾರಿಯನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಲು ಸೂಚಿಸಿದರು ಎಂದು ಸ್ವಪ್ನ ಸುರೇಶ್ ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!