ಹೊಸದಿಗಂತ ವರದಿ,ಕಲಬುರಗಿ:
ಹಟ್ಟಿ ಮತ್ತು ತಾಂಡಾಗಳ ನಿವಾಸಿಗಳಿಗೆ ಸೂಸ್ಥಿರವಾದ ಸೂರುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ವತಿಯಿಂದ 51,900 ಹಕ್ಕು ಪತ್ರಗಳನ್ನು ವಿತರಣೆ ಮಾಡಲು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಅವರು ಶುಕ್ರವಾರ ಕಾಯ೯ಕ್ರಮದ ವೇದಿಕೆಯ ಭೂಮಿ ಪೂಜೆಯನ್ನು ನೆರವೆರಿಸಿದರು.
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಹತ್ತಿರ 60 ಎಕರೆಯಲ್ಲಿ ಆಯೋಜನೆ ಮಾಡಲಾದ ಕಾಯ೯ಕ್ರಮಕ್ಕೆ ಶುಕ್ರವಾರ ಸಂಜೆ ವೇದಿಕೆ ಚೆನ್ನಾಗಿ ರೂಪಗೊಳ್ಳಲೆಂದು,ಕಾಯ೯ಕ್ರಮದ ಸ್ಥಳದ ಭೂಮಿ ಪೂಜೆ ಮಾಡಿದರು. ನಂತರ ಸ್ಥಳದಲ್ಲಿ ಸ್ವತಃ ಅವರೇ ಟ್ರ್ಯಾಕ್ಟರ್ ಹತ್ತಿ ಸುತ್ತ ಮುತ್ತ ಚಲಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಅವಿನಾಶ್ ಜಾಧವ,ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಜಿಲ್ಲಾಧಿಕಾರಿ ಯಶವಂತ ಗುರುಕರ್,ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್,ಸಿಇಓ ಗಿರೀಶ್ ಬದೋಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.