ಹೊಸದಿಗಂತ ವರದಿ, ಅಂಕೋಲಾ:
ಪರಿಶಿಷ್ಟ ಜಾತಿಯ ಯುವತಿಯೊಡನೆ ಸ್ನೇಹ ಬೆಳೆಸಿ ಮದುವೆ ಆಗುವುದಾಗಿ ನಂಬಿಸಿ ಆಕೆ ಬಲತ್ಕಾರದಿಂದ ಗರ್ಭವತಿಯಾಗಲು ಕಾರಣನಾಗಿ ಯುವತಿಗೆ ಜೀವ ಬೆದರಿಕೆ ಹಾಕಿರುವ ಯುವಕನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ
ದೂರು ದಾಖಲಾಗಿದ್ದು ಅಂಕೋಲಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ತಾಲೂಕಿನ ಬೊಬ್ರವಾಡ ನಿವಾಸಿ ಆಟೋ ಚಾಲಕ ಸಂಜಯ ಅಶೋಕ ನಾಯ್ಕ (24) ಬಂಧಿತ ಆರೋಪಿಯಾಗಿದ್ದು ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಜಾತಿ ಯುವತಿಯನ್ನು ಮೂರು ವರ್ಷಗಳ ಕಾಲದಿಂದ ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ನಂಬಿಸಿದ್ದ ಆರೋಪಿತ 2021 ರ ಜುಲೈ 10 ರಂದು ಯುವತಿಯನ್ನು ಬಾಳೇಗುಳಿ ಬಳಿ ಇರುವ ಖಾಸಗಿ ಹೊಟೇಲಿಗೆ ಕರೆದುಕೊಂಡು ಹೋಗಿ ಅಲ್ಲಿ ರೂಮ್ ಪಡೆದು ಬಲತ್ಕಾರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದು ನಂತರ ಆರೋಪಿತನು ಯುವತಿಯನ್ನು ಹಲವಾರು ಬಾರಿ
ಬಾಳೇಗುಳಿ ಅಲಗೇರಿ ಕ್ರಾಸ್ ಬಳಿ ಇರುವ ಅರಣ್ಯ ಪ್ರದೇಶಕ್ಕೆ ಆಟೋದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆ.
ಯುವತಿ ಈ ವಿಷಯ ತಿಳಿಸಿದಾಗ ಈ ವಿಷಯದಲ್ಲಿ ತನ್ನ ಹೆಸರನ್ನು ತಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ನೊಂದ ಯುವತಿ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ದ್ದು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ