ಹೊಸದಿಗಂತ ವರದಿ ಹುಬ್ಬಳ್ಳಿ:
ವಿದ್ಯುತ್ ಅವಘಡದಿಂದ ಮೇದಾರ ಓಣಿಯ ಮಟನ್ ಮಾರುಕಟ್ಟೆಯ ಗೋದಾಮಿನಲ್ಲಿದ್ದ85 ಕುರಿಗಳು ಸಾವನಪ್ಪಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ರಾಕೇಶ ಕಲಾಲ್ ಎಂಬುವರು ದಸರಾ ಹಬ್ಬದ ಪ್ರಯುಕ್ತ ನೂರಾರು ಕುರಿಗಳನ್ನು ಗೋದಾಮಿನಲ್ಲಿ ಕೂಡಿ ಹಾಕಿದ್ದರು.
ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ವಿದ್ಯುತ್ ಅವಘಡವಾಗಿ ಸಾವನ್ನಪ್ಪಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರಾಟ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಾಕೇಶ ಎಂಬುವರು ಕುರಿಗಳನ್ನು ಖರೀದಿಸಿದ್ದರು. ವಿದ್ಯುತ್ ಅವಘಡದಿಂದ ಕುರಿಗಳು ಸಾವಪ್ಪಿವೆ. ಇದರಿಂದ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿದ ಕಸಬಾಪೇಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.