ಹೊಸದಿಗಂತ ವರದಿ ಹುಬ್ಬಳ್ಳಿ:
ಉತ್ತರ ಕರ್ನಾಟಕ ಭಾಗದ ಯುವ ಪ್ರತಿಭೆ ವೀರನ ಕೇಶವ ಎಂಬುವರು ಸಸ್ಪೆನ್ಸ್ ಥ್ರಿಲ್ಲರ್ ಕನ್ನಡದ ಕಾಕ್ಟೈಲ್ ಸಿನಿಮಾ ಜ. 6ರಂದು ರಾಜ್ಯಾದ್ಯಂತ ನೂರು ಸಿನಿಮಾ ಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಿನಿಮಾದ ನಿರ್ಮಾಪಕ ಡಾ.ಎಚ್.ವಿ ಶಿವಪ್ಪ ಹೇಳಿದರು.
ವೀರನ ಕೇಶವ ನನ್ನ ಸುಪುತ್ರನಾಗಿದ್ದು, ಅವನ ಮೊದಲ ಸಿನಿಮಾ ಇದಾಗಿದೆ. ಬಾಲ್ಯದಿಂದಲೇ ನಟನೆಯಲ್ಲಿ ತೊಡಗಿಕೊಂಡಿದ್ದಾನೆ. ಆದರಿಂದ ಮಗನ ಆಸೆಯಂತೆ ಸಿನಿಮಾ ಮಾಡಲು ಸಹಕಾರ ನೀಡಿದ್ದೇನೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿನಿಮಾ ನಿರ್ದೇಶನ ಹಾಗೂ ಚಿತ್ರ ಕಥೆ ಶ್ರೀರಾಮ ಅವರು ಮಾಡಿದ್ದಾರೆ. ಸಂಗೀತ ಲೋಕಿತವ್ಯಾಸ, ಛಾಗ್ರಹಣ ರವಿವರ್ಮಾ(ಗಂಗು) ಮಾಡಿದ್ದಾರೆ. ಎರಡು ಹಾಡುಗಳಿದ್ದು, ಒಂದು ಅರಮಾನ ಮಲ್ಲಿಕ್ ಹಾಗೂ ಅನುರಾಧ ಭಟ್ ಧ್ವನಿ ನೀಡಿದ್ದಾರೆ. ಬಹುತೇಕ ಸಿನಿಮಾದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ ಎಂದರು.
ಸಿನಿಮಾದಲ್ಲಿ ವಿಶೇಷವಾಗಿ ಸಿನಿಮಾ ಇತಿಹಾಸದಲ್ಲಿ ಮೈಮ್ ಮಾಡಲಾಗಿದೆ. ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದ್ದು, ಸಿನಿಮಾದಲ್ಲಿ ನಟಿಯಾಗಿ ಚರಿಸಮಾ, ಶೋಭರಾಜ, ರಮೇಶ ಪಂಡಿತ, ಉತ್ತರ ಕರ್ನಾಟಕ ಭಾಗದ ಮಹಾತೇಶ ಹಿರೇಮಠ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಪ್ರತಿಭೆಗಳಿವೆ. ಆದರೆ ಸೂಕ್ತ ಪ್ರೋತ್ಸಾಹ ಹಾಗೂ ಸಹಕಾರ ಸಿಗುತ್ತಿಲ್ಲ. ಇಲ್ಲಿಯವರು ಬೆಂಗಳೂರಿಗೆ ಹೋದರೆ ಅಲ್ಲಿಯವರು ತಾರತಮ್ಯ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದರು.