ಮಲೆನಾಡಿನಲ್ಲಿ ಪ್ರಧಾನಿ ಮೋದಿ ನೋಡೋದಕ್ಕೆ ಸಾಗರೋಪಾದಿಯಲ್ಲಿ ಬಂದ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಪ್ರಧಾನಿ ಮೋದಿ ಶಿವಮೊಗ್ಗದಲ್ಲಿ ಏರ್‌ಪೋರ್ಟ್ ಉದ್ಘಾಟನೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ನೋಡಲು ದಊರದ ಊರುಗಳಿಂದ ಜನರು ಆಗಮಿಸಿದ್ದು, ಬಿಸಿಲನ್ನೂ ಲೆಕ್ಕಿಸದೆ ಕುಳಿತಿದ್ದಾರೆ. ಪ್ರಧಾನಿ ಮೋದಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ಬಿಸಿಲಿನಲ್ಲಿ ಆಗಮಿಸಿದ ಜನರಿಗೆ ಜ್ಯೂಸ್, ಕಾಫಿ, ಟೀ, ಊಟ, ತಿಂಡಿ ಎಲ್ಲವನ್ನೂ ಆಯೋಜನೆ ಮಾಡಲಾಗಿದೆ. ಮಧ್ಯಾಹ್ನ ಬಿಎಸ್‌ವೈ ಅವರ ಜನ್ಮದಿನದ ಅಂಗವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.

ಮೋದಿ ಆಗಮನ ಹಿನ್ನೆಲೆ ಕೆಲವು ರಸ್ತೆ ಮಾರ್ಗ ಬದಲಾವಣೆ ಮಾಡಿದ್ದು, ಟ್ರಾಫಿಕ್ ಜಾಂನಲ್ಲಿ ಕೆಲಸ ಕಚೇರಿಗೆ ಹೋಗುವವರಿಗೆ ತೊಂದರೆಯಾಗಿದೆ. ಏರ್‌ಪೋರ್ಟ್ ತಲುಪಲು ಜನ ಹೊರಟಿದ್ದು, ಟ್ರಾಫಿಕ್ ಜಾಂನಿಂದ ವಾಹನಗಳನ್ನು ಅಲ್ಲೇ ಬಿಟ್ಟು ನಡೆದುಕೊಂಡು ಹೋಗಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!