ಪ್ರಿಯಾಂಕ್ ಖಗೆ೯- ಟೀಮ್ ಸುಳ್ಳರು,ಕಳ್ಳರು: ಮಣಿಕಂಠ ಆರೋಪ

ಹೊಸದಿಗಂತ ವರದಿ,ಕಲಬುರಗಿ:

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖಗೆ೯ ಆಂಡ್ ಟಿಮ್ ಬರೀ ಸುಳ್ಳುಗಾರರು ಮತ್ತು ಕಳ್ಳರು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಆರೋಪ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಎಸೈ ಹಗರಣದಲ್ಲಿ ಬಿಜೆಪಿ ಕೈವಾಡವಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆದರೆ ಅದೇ ಪಿಎಸೈ ಹಗರಣದಲ್ಲಿ ಜೈಲು ಪಾಲಾಗಿ ಬೆಲ್ ಮೇಲೆ ಹೊರಗಡೆ ಬಂದ ಮಹಾಂತೇಶ ಪಾಟೀಲ್, ನನ್ನು ಕಾಂಗ್ರೆಸ್ ಮುಖಂಡ ಅಲ್ಲಂಪ್ರಭು ಪಾಟೀಲ್ ಸನ್ಮಾನಿಸಿದ್ದಾರೆ ಎಂದು ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಅವರು ಎರಡು ಇಂಗ್ಲಿಷ್ ಮಿಡಿಯಂ ಶಾಲೆಗಳನ್ನು ನಡೆಸುತ್ತಿದ್ದಾರೆ. ಆದರೆ, ಅವುಗಳ ಪರವಾನಗಿ ಕನ್ನಡ ಮಾದ್ಯಮ ಶಾಲೆಗಳದ್ದಿದೆ. ಪ್ರತಿ ಬಾರಿ ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದವರು ದಲಿತ ಪ್ರೇಮಿಗಳಲ್ಲ.ಬದಲಾಗಿ ದಲಿತ ವಿರೋದಿಗಳು.ನಿರಂತರವಾಗಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಜನವಿರೋಧಿ ನೀತಿ ಅನುಸರಿಸುವ ಇವರು,ಇವರ ಎದುರಿಗೆ ಬೇರೆ ಯಾರು ಬೆಳೆಯಬಾರದು ಎಂಬ ಉದ್ದೇಶವನ್ನು ಹೊಂದಿದ್ದಾರೆ ಎಂದು ಹೇಳಿದರು. ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಅಲ್ಲ.ಒಂದು ವೇಳೆ ಟಿಕೆಟ್ ನೀಡಿದರೇ,ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದನಿದ್ದೇನೆ.ಇಲ್ಲವಾದರೇ ಪ್ರಿಯಾಂಕ್ ಖಗೆ೯ ಸೋಲಿಸುವುದೊಂದೆ ನನ್ನ ಗುರಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!