ಹೊಸದಿಗಂತ ವರದಿ ಗದಗ:
ನಗರದ ಕೇಂದ್ರ ಭಾಗದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಬಡವರಿಗೆ ಅನುಕೂಲವಾಗಿದ್ದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ಸರಕಾರಿ ಹೆರಿಗೆ ಆಸ್ಪತ್ರೆ)ಯನ್ನು ದಿಢೀರನೆ ಸ್ಥಳಾಂತರ ಗೊಳಿಸಿರುವುದನ್ನು ಖಂಡಿಸಿ ಹೆರಿಗೆ ಆಸ್ಪತ್ರೆಯ ಮುಂದೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಹಾಗೂ ಎಂದಿನಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ವೈದ್ಯಾದಿಕಾರಿ ಡಾ.ಜಿ.ಎಸ್.ಪಲ್ಲೇದ ಅವರು ಎಲ್ಲ ತಪಾಸಣೆ ಗಳನ್ನು ಇಲ್ಲಿಯೇ ನಡೆಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂತೆಗೆದುಕೊಂಡರು.