ಹೊಸದಿಗಂತ ವರದಿ ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಅಭ್ಯರ್ಥಿ ಯಾಗಿದ್ದ ಶಾಂತಿಬಾಯಿ ಹಾಗೂ ಪತಿ ಬಸಯ್ಯಾ ನಾಯಕ ಕೊನೆಗೂ ಎರಡು ತಿಂಗಳ ಬಳಿಕ ಸಿಐಡಿ ಬಲೆಗೆ ಬಿದ್ದಿದ್ದಾರೆ. ತೆಲಂಗಾಣದ ಹೈದರಾಬಾದ್ ನಲ್ಲಿ ಸಿಐಡಿ ಪೋಲಿಸರು ಶಾಂತಿಬಾಯಿ ಹಾಗೂ ಆಕೆಯ ಪತಿ ಬಸಯ್ಯಾ ನಾಯಕ್ನನ್ನು ಬಂಧನ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಿವಾಸಿಯಾಗಿರುವ ಶಾಂತಿಬಾಯಿ ಪಿಎಸ್ಐ ಪರೀಕ್ಷೆಯಲ್ಲಿ ಪಾಸಾಗಿದ್ದು, ಮಂಜುನಾಥ್ ಮೇಳಕುಂದಿಗೆ ಹಣ ನೀಡಿದ್ದರು. ಇನ್ನೂ ಹೈದ್ರಾಬಾದ್ನಿಂದ ಕಲಬುರಗಿ ಕಡೆಗೆ ಶಾಂತಿಬಾಯಿ ಹಾಗೂ ಆಕೆಯ ಗಂಡ ಬಸಯ್ಯಾ ನಾಯಕನನ್ನು ಸಿಐಡಿ ಪೋಲಿಸರು ಕರೆ ತರಲಿದ್ದಾರೆ.