ಪಿಎಸ್ಐ ಅಕ್ರಮ ನೇಮಕಾತಿ: 26ನೇ ಪ್ರಮುಖ ಕಿಂಗ್ ಪಿನ್ ಕಾಶಿನಾಥ್ ಸಿಐಡಿಗೆ ಶರಣಾಗತಿ

ಹೊಸದಿಗಂತ ವರದಿ ಕಲಬುರಗಿ:

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಸಿಐಡಿಗೆ ಸೋಮವಾರ ಬೆಳಿಗ್ಗೆ ಶರಣಾಗಿದ್ದಾನೆ. ಕಾಶಿನಾಥ್ ಕಳೆದ 21 ದಿನಗಳಿಂದ ತಲೆ ಮರೆಸಿಕೊಂಡಿದ್ದು, ಇದೀಗ ಸಿಐಡಿಗೆ ಶರಣಾಗಿದ್ದಾನೆ.

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಈತನೇ ಮುಖ್ಯ ಹೆಡ್ ಮಾಸ್ಟರ್. ಕಾಶಿನಾಥ್ ಶರಣಾಗತಿಯಿಂದ ಒಟ್ಟು ಬಂಧಿತ ಆರೋಪಿಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!