ಜೇಮ್ಸ್ ಚಿತ್ರಕ್ಕೆಪುನೀತ್ ವಾಯ್ಸ್ ರಿಕ್ರಿಯೇಷನ್ ನನಗೆ ನಿಜಕ್ಕೂ ಶಾಕ್ ಜೊತೆಗೆ ತುಂಬಾ ಖುಷಿನೂ ಆಗಿದೆ: ಚಿತ್ರ ನಟ ಶಿವರಾಜ್ ಕುಮಾರ್

ಹೊಸದಿಗಂತ ವರದಿ, ಮೈಸೂರು:

ಜೇಮ್ಸ್ ಚಿತ್ರಕ್ಕೆ ಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರ ವಾಯ್ಸ್ ರಿಕ್ರಿಯೇಷನ್ ವಿಚಾರ ಕೇಳಿ ನನಗೆ ನಿಜಕ್ಕೂ ಶಾಕ್ ಆಗಿದೆ. ಅದರ ಜೊತೆಗೆ ತುಂಬಾ ಖುಷಿನೂ ಆಗಿದೆ ಎಂದು ಚಿತ್ರ ನಟ ಶಿವರಾಜ್ ಕುಮಾರ್ ಆಶ್ಚರ್ಯ ವ್ಯಕ್ತಪಡಿಸಿದರು.
ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ಕೇಳಿ ನನಗೆ ನಿಜಕ್ಕೂ ಆಶ್ಚರ್ಯ ಆಯ್ತು, ಈ ರೀತಿಯೂ ಆಪ್‌ಗಳು ಇದ್ದಾವ ಅಂತ. ಫಿಲಂ ವಾಯ್ಸ್ ರಿಗೈನ್ಡ್ ಫುಲ್ ಕಂಪ್ಲೀಟ್ ಆಗಿದೆ ಅಂತ ಹೇಳಿದ್ರು. ಕಂಪ್ಲೀಟ್ ವಾಯ್ಸ್ನ ರೀಗೈನ್ಡ್ ಮಾಡಬಹುದು ಅಂತ ಹೇಳಿದ್ದಾರೆ. ಇದು ಯಾವ ರೀತಿ ಟೆಕ್ನಿಕಲ್ ಆಗಿದೆ ಅಂತ ಗೊತ್ತಿಲ್ಲ. ಮೊದಲೇ ಪುನೀತ್ ವಾಯ್ಸ್ ರೀಗೈನ್ಡ್ ಮಾಡಬಹುದಾಗಿತ್ತೇನೋ. ಈ ಮಾತನ್ನ ಹೇಳಿದ್ದ ತಕ್ಷಣ ಶಾಕ್ ನನಗೆ. ಆದರೆ ಅಷ್ಟೇ ತುಂಬಾ ಖುಷಿಯೂ ಆಯ್ತು ಎಂದು ಸಂತಸ ವ್ಯಕ್ತಪಡಿಸಿದರು.
ನೂರು ಕೆಜಿಎಫ್ ಚಿತ್ರಕ್ಕೆ ಒಂದು ಪುಷ್ಪ ಸಿನಿಮಾ ಸಮಾನ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ನಟ ಶಿವರಾಜ್ ಕುಮಾರ್, ಚಿತ್ರರಂಗ ಅನ್ನೋದು ಒಂದು ಸಮುದ್ರವಿದ್ದಂತೆ. ಅದರಲ್ಲಿ ಯಾರು ಬೇಕಾದರೂ ಈಜಬಹುದು. ಯಾರು ಬೇಕಾದರೂ ಮೇಲಕ್ಕೆ ಹೋಗಬಹುದು. ಕೆಳಗೂ ಹೋಗಬಹುದು. ಇದು ನನಗೆ ಬೇಕಿಲ್ಲದ ವಿಚಾರ,ಅದನ್ನ ಜನತೆಗೆ ಬಿಡೋಣ. ಯಾವುದು ಏನಾಗ್ತಿದೆ ಅನ್ನೋದು ದೇವರಿಗೆ ಮಾತ್ರ ಗೊತ್ತು, ನಿರ್ಮಾಪಕರಿಗೆ ಗೊತ್ತಷ್ಟೆ. ಇದರಿಂದ ಏನೂ ಪ್ರಯೋಜನವಿಲ್ಲ, ಯಾವುದನ್ನೂ ವಿವಾದ ಮಾಡಬಾರದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!