ವ್ಯಕ್ತಿಯ ಕಾಲಿಗೆ ಸುತ್ತಿಕೊಂಡ ಹೆಬ್ಬಾವು: ರಕ್ಷಿಸಲು ಹರಸಾಹಸ ಪಟ್ಟ ವಿಡಿಯೋ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡು ರಾಜ್ಯದ ತಿರುಪತ್ತೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 10 ಅಡಿ ಹೆಬ್ಬಾವೊಂದು ಕೈಲಾಸಗಿರಿ ಗ್ರಾಮದ ಶಂಕರ್ ಎಂಬುವವರ ಜಮೀನಿಗೆ ನುಗ್ಗಿದೆ. ಓಡಿಸಲು ಯತ್ನಿಸಿದ ಶಂಕರ್ ಮೇಲೆರಗಿ ಕಾಲಿಗೆ ಸುತ್ತು ಹಾಕಿದೆ. ಸುತ್ತಿಕೊಂಡು ಹೆಬ್ಬಾವು ಬಿಡಿಸಲು ನಾನಾ ತರಹ ಪ್ರಯತ್ನಸಿದರೂ ವಿಫಲವಾಯಿತು. ಅಕ್ಕಪಕ್ಕದ ಜನ ಬಂದು ಬಿಡಿಸಿದರೂ ಚೂರು ಲಾಭವಿಲ್ಲ.

ಕೊನೆಗೆ ಅಗ್ನಿಶಾಮಕ ಮತ್ತು ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದರು. ಕ್ಷೇತ್ರಕ್ಕೆ ನುಗ್ಗಿದ ರಕ್ಷಣಾ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಶ್ರಮಿಸಿ ಶಂಕರ್ ನನ್ನು ಹೆಬ್ಬಾವಿನ ಹಿಡಿತದಿಂದ ರಕ್ಷಿಸಿದ್ದಾರೆ. ಶಂಕರ್ ಸುರಕ್ಷಿತವಾಗಿ ಪಾರಾಗುತ್ತಿದ್ದಂತೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆಬ್ಬಾವು ಕಾಲಿಗೆ ಸುತ್ತಿಕೊಂಡಿದ್ದರಿಂದ ಶಂಕರ್ ಹಾಗೂ ಕುಟುಂಬಸ್ಥರು ಭಯಭೀತರಾಗಿದ್ದರು. ಅಧಿಕಾರಿಗಳು ಮಧ್ಯಪ್ರವೇಶಿಸಿ ಶಂಕರ್‌ನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!